ಗ್ರಾಹಕರು ಬ್ಯಾಂಕಿನಲ್ಲಿರುವ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ: ತರುನಿ ಚರಣ್ ಸಾಹು ವಿಜಯನಗರ: ಗ್ರಾಹಕರು ಬ್ಯಾಂಕಿನಲ್ಲಿರುವ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ ಎಂದು ಹುಬ್ಬಳ್ಳಿ ಧಾರವಾಡ ವಲಯ ವಿಭಾಗದ ಮುಖ್ಯಸ್ಥ ತರುನಿ ಚರಣ್ ಸಾಹು ಹೇಳಿದರು. ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಬಾಂಕ್ ಆಫ್ ಇಂಡಿಯಾದಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತಿ ಮಟ್ಟದ ಆರ್ಥಿಕ ಯೋಜನೆಗಳ ಸ್ಯಾಚುರೇಶನ್ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಇಡೀ ದೇಶದ್ಯಾಂತ ಕೇಂದ್ರ ಸರ್ಕಾರ ಸಾರ್ವಜನಿಕರ ಸಾಮಾಜಿಕ ಭದ್ರತೆ ದೃಷ್ಟಿಯಿಂದ ಹತ್ತು ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ. ಬ್ಯಾಂಕ್ ಖಾತೆಗಳನ್ನ ಹೊಂದಿರುವ ಪ್ರತಿಯೊಬ್ಬ ಗ್ರಾಹಕರಿಗೆ ಅವರ ಜೀವನ ಭದ್ರತೆಯಿಂದ ಕೂಡಿರಲಿ ಅಂತ ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 18 ವರ್ಷದಿಂದ 40 ವರ್ಷದ ಒಳಗಿನ ಪ್ರತಿಯೊಬ್ಬ ಭಾರತೀಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈಗಾಗಲೇ ಈ ಯೋಜನೆಯಲ್ಲಿ 7.83 ಕೋಟಿ ನೊಂದಣಿಗೊಂಡಿವೆ, ಪ್ರಧಾನ ಮಂತ್ರಿ ಸುರಾಕ್ಷಾ ಬೀಮಾ ಯೋಜನೆ ಅಡಿಯಲ್ಲಿ ನೊಂದಣಿ ಮಾಡಿಕೊಂಡ ಫಲಾನುಭವಿಗಳಿಗೆ ಮೃತ ವ್ಯಕ್ತಿಯ ಕುಟುಂಬ ಆರ್ಥಿಕ ತೊಂದರೆಗೆ ಸಿಲುಕಬಾರದು ಎಂಬ ಉದ್ದೇಶದಿಂದ 2 ಲಕ್ಷದ ವರೆಗಿನ ವಿಮೆ ಬರುತ್ತದೆ ಇಂತಹ ಸೌಲಭ್ಯಗಳನ್ನ ಬ್ಯಾಂಕ್ ನಲ್ಲಿ ಲಭ್ಯ ಇವೆ ಇದರ ಸದುಪಯೋಗವನ್ನ ಪ್ರತಿಯೊಬ್ಬರು ಬಳಸಿಕೊಳ್ಳಿ ಎಂದರು. ಇನ್ನು ಇದೇ ವೇಳೆ ಲೀಡ್ ಜಿಲ್ಲಾ ವ್ಯವಸ್ಥಾಪಕ ವಿರೇಂದ್ರ ಕುಮಾರ್ ಮಾತನಾಡಿ, ಶೇ.100% ರಲ್ಲಿ ಸಮಾರು ಶೇ.50% ರಷ್ಟು ಬ್ಯಾಂಕ್ ಖಾತೆಗಳು ಈ ಕೇವೈಸಿ ಮಾಡದೇ ಹಾಗೆ ಉಳಿದುಕೊಂಡಿವೆ ಇದರಿಂದಾಗಿ ಸರ್ಕಾರದಿಂದ ಸಿಗುವ ಸಬ್ಸಿಡಿ ಹಣ ಸೇರಿದಂತೆ ಯಾವುದೇ ಹಣ ಫಲಾನುಭವಿಗಳಿಗೆ ತಲುವುದೇ ಇಲ್ಲ ಹಾಗಾಗಿ ಪ್ರತಿಯೊಬ್ಬರೂ ಬ್ಯಾಂಕ್ ಗೆ ಹೋಗಿ ಆಧಾರ್ ಈ ಕೇವೈಸಿ ಮಾಡಿಸಿಕೊಳ್ಳಬೇಕು, ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿ ನಡೆಯುತ್ತವೆ, ಬ್ಯಾಂಕಿನ ಗ್ರಾಹಕರನ್ನ ಈ ಕೇವೈಸಿ ಮಾಡಲಾಗುತ್ತಿದೆ ನಿಮ್ಮ ಮೊಬೈಲ್ ಒಟಿಪಿ ತೆಗೆದುಕೊಂಡು ಹಣವನ್ನ ಆನ್ ಲೈನ್ ಮೂಲಕ ದೋಚುವ ಕೃತ್ಯಗಳು ನಡೆಯುತ್ತಿವೆ. ಆನ್ ಲೈನ್ ವಂಚನೆಗೆ ಒಳಗಾಗ ಬೇಡಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ ಅಡಿ ಈಗಾಗಲೇ 23.84 ಕೋಟಿ ನೊಂದಣಿಗೊಂಡಿವೆ ಈ ಯೋಜನೆಯಲ್ಲಿ 18 ರಿಂದ 50 ವರ್ಷದ ಒಳಗಿನ ಪ್ರತಿಯೊಬ್ಬ ಭಾರತೀಯ ನೊಂದಣಿ ಮಾಡಿಸಿಕೊಳ್ಳಬಹುದು. ಇಂತಹ ಕೇಂದ್ರ ಸರ್ಕಾರದ ಯೋಜನೆಗಳಾದ ಜೀವಾ ವಿಮೆ, ಅಪಘಾತ ವಿಮೆ ಸೇರಿದಂತೆ ನಾನ ಯೋಜನೆಗಳು ಪ್ರತಿಯೊಬ್ಬ ನಾಗರಿಕರಿಗೆ ತಲುಪದೇ ಇರೋದು ಬೇಸರದ ವಿಷಯ ಪ್ರತಿಯೊಬ್ಬರು ನೊಂದಣಿ ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಇನ್ನು ಇದೇ ಕಾರ್ಯಕ್ರಮದಲ್ಲಿ ಎರಡು ಫಲಾನುಭವಿಗಳಿಗೆ ಅಪಘಾತದಲ್ಲಿ ಮೃತ ಪಟ್ಟ ಕುಟುಂಬಕ್ಕೆ 2 ಲಕ್ಷ ರೂ ಚೆಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ವ್ಯವಸ್ಥಾಪಕಿ ಸುಮಾ ಸಿ ಆರ್, ಸಿಬ್ಬಂದಿಗಳಾದ ಕಲ್ಯಾಣಿ, ಹನುಮೇಶ್, ವೈಶಾಲಿ, ಶಿಲ್ಪಾ ಕೆ.ರಮೇಶ್, ರಾಜೇಶ್ ರವಿತೇಜ ರಾಘವೇಂದ್ರ, ಶ್ರೀನಿವಾಸ,ಡಣಾಪುರ ರಾಘವೇಂದ್ರ ಶೆಟ್ರು, ಸತ್ಯನಾರಾಯಣ, ಕಚಟಿ ಹುಲುಗಪ್ಪ ಈಡಿಗರ ನಾಗರಾಜಪ್ಪ, ಸೇರಿದಂತೆ ಬ್ಯಾಂಕಿನ ಗ್ರಾಹಕರು ಭಾಗವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿ ನಡೆಯುತ್ತವೆ, ಬ್ಯಾಂಕಿನ ಗ್ರಾಹಕರಿಗೆ ವಂಚಕರು ಕರೆ ಮಾಡಿ ಈ ಕೇವೈಸಿ ಮಾಡಲಾಗುತ್ತಿದೆ ನಿಮ್ಮ ಮೊಬೈಲ್ ಒಟಿಪಿ ತೆಗೆದುಕೊಂಡು ಹಣವನ್ನ ಆನ್ ಲೈನ್ ಮೂಲಕ ದೋಚುವ ಕೃತ್ಯಗಳು ನಡೆಯುತ್ತಿವೆ. ಬ್ಯಾಂಕಿನವರು ಯಾವುತ್ತೂ ಕೂಡ ಒಟಿಪಿ ಪಡೆದುಕೊಳ್ಳುವುದಕ್ಕೆ ಕರೆ ಮಾಡುವುದಿಲ್ಲ ಒಂದು ವೇಳೆ ಮಾಡಿದ್ರೆ ಒಟಿಪಿ ಕೊಡಬೇಡಿ ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀವು ಆನ್ ಲೈನ್ ವಂಚನೆಗೆ ಒಳಗಾಗ ಬೇಡಿ ಎಂದು ಎಚ್ಚರಿಕೆ ನೀಡಿದರು:- ಸುಮಾ ಸಿ ಆರ್, ವ್ಯವಸ್ಥಾಪಕಿ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮರಿಯಮ್ಮನಹಳ್ಳಿ.
ಗ್ರಾಹಕರು ಬ್ಯಾಂಕಿನಲ್ಲಿರುವ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ: ತರುನಿ ಚರಣ್ ಸಾಹು ವಿಜಯನಗರ: ಗ್ರಾಹಕರು ಬ್ಯಾಂಕಿನಲ್ಲಿರುವ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ ಎಂದು ಹುಬ್ಬಳ್ಳಿ ಧಾರವಾಡ ವಲಯ ವಿಭಾಗದ ಮುಖ್ಯಸ್ಥ ತರುನಿ ಚರಣ್ ಸಾಹು ಹೇಳಿದರು. ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಬಾಂಕ್ ಆಫ್ ಇಂಡಿಯಾದಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತಿ ಮಟ್ಟದ ಆರ್ಥಿಕ ಯೋಜನೆಗಳ ಸ್ಯಾಚುರೇಶನ್ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಇಡೀ ದೇಶದ್ಯಾಂತ ಕೇಂದ್ರ ಸರ್ಕಾರ ಸಾರ್ವಜನಿಕರ ಸಾಮಾಜಿಕ ಭದ್ರತೆ ದೃಷ್ಟಿಯಿಂದ ಹತ್ತು ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ. ಬ್ಯಾಂಕ್ ಖಾತೆಗಳನ್ನ ಹೊಂದಿರುವ ಪ್ರತಿಯೊಬ್ಬ ಗ್ರಾಹಕರಿಗೆ ಅವರ ಜೀವನ ಭದ್ರತೆಯಿಂದ ಕೂಡಿರಲಿ ಅಂತ ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 18 ವರ್ಷದಿಂದ 40 ವರ್ಷದ ಒಳಗಿನ ಪ್ರತಿಯೊಬ್ಬ ಭಾರತೀಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈಗಾಗಲೇ ಈ ಯೋಜನೆಯಲ್ಲಿ 7.83 ಕೋಟಿ ನೊಂದಣಿಗೊಂಡಿವೆ, ಪ್ರಧಾನ ಮಂತ್ರಿ ಸುರಾಕ್ಷಾ ಬೀಮಾ ಯೋಜನೆ ಅಡಿಯಲ್ಲಿ ನೊಂದಣಿ ಮಾಡಿಕೊಂಡ ಫಲಾನುಭವಿಗಳಿಗೆ ಮೃತ ವ್ಯಕ್ತಿಯ ಕುಟುಂಬ ಆರ್ಥಿಕ ತೊಂದರೆಗೆ ಸಿಲುಕಬಾರದು ಎಂಬ ಉದ್ದೇಶದಿಂದ 2 ಲಕ್ಷದ ವರೆಗಿನ ವಿಮೆ ಬರುತ್ತದೆ ಇಂತಹ ಸೌಲಭ್ಯಗಳನ್ನ ಬ್ಯಾಂಕ್ ನಲ್ಲಿ ಲಭ್ಯ ಇವೆ ಇದರ ಸದುಪಯೋಗವನ್ನ ಪ್ರತಿಯೊಬ್ಬರು ಬಳಸಿಕೊಳ್ಳಿ ಎಂದರು. ಇನ್ನು ಇದೇ ವೇಳೆ ಲೀಡ್ ಜಿಲ್ಲಾ ವ್ಯವಸ್ಥಾಪಕ ವಿರೇಂದ್ರ ಕುಮಾರ್ ಮಾತನಾಡಿ, ಶೇ.100% ರಲ್ಲಿ ಸಮಾರು ಶೇ.50% ರಷ್ಟು ಬ್ಯಾಂಕ್ ಖಾತೆಗಳು ಈ ಕೇವೈಸಿ ಮಾಡದೇ ಹಾಗೆ ಉಳಿದುಕೊಂಡಿವೆ ಇದರಿಂದಾಗಿ ಸರ್ಕಾರದಿಂದ ಸಿಗುವ ಸಬ್ಸಿಡಿ ಹಣ ಸೇರಿದಂತೆ ಯಾವುದೇ ಹಣ ಫಲಾನುಭವಿಗಳಿಗೆ ತಲುವುದೇ ಇಲ್ಲ ಹಾಗಾಗಿ ಪ್ರತಿಯೊಬ್ಬರೂ ಬ್ಯಾಂಕ್ ಗೆ ಹೋಗಿ ಆಧಾರ್ ಈ ಕೇವೈಸಿ ಮಾಡಿಸಿಕೊಳ್ಳಬೇಕು, ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿ ನಡೆಯುತ್ತವೆ, ಬ್ಯಾಂಕಿನ ಗ್ರಾಹಕರನ್ನ ಈ ಕೇವೈಸಿ ಮಾಡಲಾಗುತ್ತಿದೆ ನಿಮ್ಮ ಮೊಬೈಲ್ ಒಟಿಪಿ ತೆಗೆದುಕೊಂಡು ಹಣವನ್ನ ಆನ್ ಲೈನ್ ಮೂಲಕ ದೋಚುವ ಕೃತ್ಯಗಳು ನಡೆಯುತ್ತಿವೆ. ಆನ್ ಲೈನ್ ವಂಚನೆಗೆ ಒಳಗಾಗ ಬೇಡಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ ಅಡಿ ಈಗಾಗಲೇ 23.84 ಕೋಟಿ ನೊಂದಣಿಗೊಂಡಿವೆ ಈ ಯೋಜನೆಯಲ್ಲಿ 18 ರಿಂದ 50 ವರ್ಷದ ಒಳಗಿನ ಪ್ರತಿಯೊಬ್ಬ ಭಾರತೀಯ ನೊಂದಣಿ ಮಾಡಿಸಿಕೊಳ್ಳಬಹುದು. ಇಂತಹ ಕೇಂದ್ರ ಸರ್ಕಾರದ ಯೋಜನೆಗಳಾದ ಜೀವಾ ವಿಮೆ, ಅಪಘಾತ ವಿಮೆ ಸೇರಿದಂತೆ ನಾನ ಯೋಜನೆಗಳು ಪ್ರತಿಯೊಬ್ಬ ನಾಗರಿಕರಿಗೆ ತಲುಪದೇ ಇರೋದು ಬೇಸರದ ವಿಷಯ ಪ್ರತಿಯೊಬ್ಬರು ನೊಂದಣಿ ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಇನ್ನು ಇದೇ ಕಾರ್ಯಕ್ರಮದಲ್ಲಿ ಎರಡು ಫಲಾನುಭವಿಗಳಿಗೆ ಅಪಘಾತದಲ್ಲಿ ಮೃತ ಪಟ್ಟ ಕುಟುಂಬಕ್ಕೆ 2 ಲಕ್ಷ ರೂ ಚೆಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ವ್ಯವಸ್ಥಾಪಕಿ ಸುಮಾ ಸಿ ಆರ್, ಸಿಬ್ಬಂದಿಗಳಾದ ಕಲ್ಯಾಣಿ, ಹನುಮೇಶ್, ವೈಶಾಲಿ, ಶಿಲ್ಪಾ ಕೆ.ರಮೇಶ್, ರಾಜೇಶ್ ರವಿತೇಜ ರಾಘವೇಂದ್ರ, ಶ್ರೀನಿವಾಸ,ಡಣಾಪುರ ರಾಘವೇಂದ್ರ ಶೆಟ್ರು, ಸತ್ಯನಾರಾಯಣ, ಕಚಟಿ ಹುಲುಗಪ್ಪ ಈಡಿಗರ ನಾಗರಾಜಪ್ಪ, ಸೇರಿದಂತೆ ಬ್ಯಾಂಕಿನ ಗ್ರಾಹಕರು ಭಾಗವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿ ನಡೆಯುತ್ತವೆ, ಬ್ಯಾಂಕಿನ ಗ್ರಾಹಕರಿಗೆ ವಂಚಕರು ಕರೆ ಮಾಡಿ ಈ ಕೇವೈಸಿ ಮಾಡಲಾಗುತ್ತಿದೆ ನಿಮ್ಮ ಮೊಬೈಲ್ ಒಟಿಪಿ ತೆಗೆದುಕೊಂಡು ಹಣವನ್ನ ಆನ್ ಲೈನ್ ಮೂಲಕ ದೋಚುವ ಕೃತ್ಯಗಳು ನಡೆಯುತ್ತಿವೆ. ಬ್ಯಾಂಕಿನವರು ಯಾವುತ್ತೂ ಕೂಡ ಒಟಿಪಿ ಪಡೆದುಕೊಳ್ಳುವುದಕ್ಕೆ ಕರೆ ಮಾಡುವುದಿಲ್ಲ ಒಂದು ವೇಳೆ ಮಾಡಿದ್ರೆ ಒಟಿಪಿ ಕೊಡಬೇಡಿ ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀವು ಆನ್ ಲೈನ್ ವಂಚನೆಗೆ ಒಳಗಾಗ ಬೇಡಿ ಎಂದು ಎಚ್ಚರಿಕೆ ನೀಡಿದರು:- ಸುಮಾ ಸಿ ಆರ್, ವ್ಯವಸ್ಥಾಪಕಿ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮರಿಯಮ್ಮನಹಳ್ಳಿ.
- ಎಚ್ ಟಿ ಎಂ ಆಯುರ್ವೇದ ಬೆಂಗಳೂರು ಹಕೀಮ್ ನೌಷದ್ ಖಾನ್ ( ಪಾರಂಪರಿಕ )1
- ಮಳವಳ್ಳಿ ಪಟ್ಟಣದಲ್ಲಿ ಸುತ್ತೂರು ಜಯಂತಿ ಆಚರಣೆಗೆ ಆರಂಭಕ್ಕೆ ಕ್ಷಣಗಣನೆ: ಮದುವಣಿಗೀತಿಯಂತೆ ಸಿಂಗಾರ ಗೊಂಡ ಪಟ್ಟಣ1
- *ಭಾರತ ನಲ್ಲಿ ವೈರಲ್*1
- ಮಳವಳ್ಳಿ ಪಟ್ಟಣಕ್ಕೆ ಸುತ್ತೂರಿನಿಂದ ಆದಿಜಗದ್ಗರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿ ಅಗಮನಕ್ಕೆ ಕ್ರಣಗಣನೆ-ಸುತತೂರಿನಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳಿಂದ ವಿದ್ಯುಕ್ತ ಚಾಲನೆ ಸುತ್ತೂರು ಕ್ಷೇತ್ರದಿಂದ ಮಳವಳ್ಳಿಗೆ ಅಗಮಿಸುವ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿಗೆ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಸ್ವಾಮಿಗಳು ಸಂಪ್ರದಾಯಬದ್ದ ಆಚರಣೆಗಳೊಂದಿಗೆ ವಿದ್ಯುಕ್ತವಾಗಿ ಸೋಮವಾರ ಬೆಳಿಗ್ಗೆ ೭.೩೦ ಗಂಟೆಯಲ್ಲಿ ಚಾಲನೆ ನೀಡಿದರು,ಸ್ವತ: ಪರಮಪೂಜ್ಯರ ನೇತೃತ್ವದಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಸುತ್ತೂರಿನಿಂದ ಮಂಗಳವಾದ್ಯ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಮಳವಳ್ಳಿಗೆ ಟಿ.ನರಸೀಪುರದ ಮೂಲಕ ಮಳವಳ್ಳಿ ಕ್ಷೇತ್ರಕ್ಕೆ ಅಗಮಿಸಲಿದ್ದು,ಗಡಿಬಾಗದ ಚಿಕ್ಕಬಾಗಿಲು ಗ್ರಾಮದಲ್ಲಿ ತಾಲೂಕಿನ ಹರಗುರು ಚರಮೂರ್ತಿಗಳು,ಸರ್ದಭಕ್ತರು,ಜನಪ್ರತಿನಿಧಿಗಳು ವಿಶೇಷ ಪೂಜೆಯೊಂದಿಗೆ ಬರಮಾಡಿಕೊಳೂವತ್ತ ಸಿದ್ದತೆ ನಡೆಸಿದ್ದಾರೆ..ಚಿಕ್ಕಬಾಗಿಲಿನಿಂದ ಪೂರಿಗಾಲಿ,ಸರಗೂರು,ಮುಟ್ಟನಹಳ್ಳಿ,ಬಿ.ಜಿ.ಪುರ,ವಾಸುವಳ್ಳಿ,ಬೆಳಕವಾಡಿಗೆ ಅಗಮಿಸಲಿದ್ದು,ಬೆಳಕವಾಡಿ ಮಠದ ಶ್ರೀಗಳು ವಿಶೇಷ ಪೂಜೆಯೊಂದಿಗೆ ಉತ್ಸವ ಮೂರ್ತಿಯನ್ನು ಬರಮಾಡಿಕೊಳ್ಳುವರು ಇದೇ ಸಂದರ್ಭದಲ್ಲಿ ಅಗಮಿಸುವ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಾಗಿದೆ.1
- ಮಳವಳ್ಳಿಯಲ್ಲಿ ಡಿಸೆಂಬರ್ 15 ರಿಂದ ನಡೆಯುವ ಸುತ್ತೂರು ಜಯಂತಿ ಮಹೋತ್ಸವದ ಯಶಸ್ವಿಗೆ ಕೈಜೋಡಿಸಲು ಮಾಜಿ ಶಾಸಕರಾದ ಡಾ ಕೆ ಅನ್ನದಾನಿ ಕರೆ ಮಳವಳ್ಳಿ: ಪಟ್ಟಣದಲ್ಲಿ ನಡೆಯುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವದ ಯಶಸ್ವಿಗೆ ಎಲ್ಲರೂ ಸಕ್ರೀಯವಾಗಿ ಭಾಗಿಯಾಗಬೇಕು ಎಂದು ಮಾಜಿ ಶಾಸಕ ಕೆ.ಅನ್ನದಾನಿ ಕರೆ ನೀಡಿದರು. ಪಟ್ಟಣದ ಸುತ್ತೂರು ಜಯಂತ್ಯುತ್ಸವ ಆಚರಣಾ ಸಮಿತಿಯ ಕಾರ್ಯಾಲಯದಲ್ಲಿ ಶನಿವಾರ ಅವರು ಮಾತನಾಡಿ, ಇಂಥ ಐತಿಹಾಸಿಕ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜನರು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಪಾಲ್ಗೊಂಡು ಯಶಸ್ವಿಗೆ ಶ್ರಮಿಸಬೇಕು. ರಾಷ್ಟ್ರದ ಪ್ರಥಮ ಪ್ರಜೆಯನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುತ್ತೂರು ಮಠವು ಸಾಕಷ್ಟು ಶ್ರಮ ವಹಿಸಿದೆ. ಸುತ್ತೂರು ಮಠದಲ್ಲಿ ಎಲ್ಲ ಧರ್ಮೀಯರು ಹಾಗೂ ಜಾತಿಯರು ವಿದ್ಯಾಭ್ಯಾಸ ಸೇರಿದಂತೆ ಎಲ್ಲೆಡೆ ಇದ್ದಾರೆ. ಹಿರಿಯರಾದ ಶಿವಯೋಗಿಗಳು ಆರಂಭಿಸಿದ ಮಠದ ಸಾಮಾಜಿಕ ಜವಾಬ್ದಾರಿಗಳನ್ನು ತೋರಿಸುವ ನಿಟ್ಟಿನಲ್ಲಿ ಇಂಥ ಜಯಂತ್ಯುತ್ಸವವನ್ನು ವಾರಗಟ್ಟಲೆ ಆಚರಿಸಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಅದ್ದೂರಿ ಆಚರಣೆಗೆ ಮುಂದಾಗೋಣ ಎಂದು ಕರೆ ನೀಡಿದರು. ಬಸವಣ್ಣ ಅವರ ಹಾದಿಯಲ್ಲಿ ಸಾಗುತ್ತಿರುವ ಸುತ್ತೂರು ಮಠದ ಸಾರಥ್ಯದಲ್ಲಿ ಏಳು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಷ್ಠಿಗಳು ನಿರಂತರವಾಗಿ ನಡೆಯಲಿವೆ. ಅನೇಕ ವಿಷಯಗಳು ಜನರ ಗಮನ ಸೆಳೆಯಲಿದೆ. ಡಿ.16ರಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಆಗಮನ ಇತಿಹಾಸದ ಪುಟದಲ್ಲಿ ಉಳಿಯಲಿದೆ. ಪ್ರತಿದಿನ ಎಲ್ಲ ಗ್ರಾಮಗಳಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜನರು ಯಾವುದೇ ಆತಂಕವಿಲ್ಲದೇ ಬರಬೇಕು. ಸಂಜೆ 4ಗಂಟೆಗೆ ಆಗಮಿಸಿ ರಾತ್ರಿ 9ಗಂಟೆವರೆಗೆ ಇರಬೇಕು. ಯಾವುದೇ ಲೋಪವಾಗದಂತೆ ಸ್ವಯಂ ಸೇವಕ ತಂಡ ನಿಮ್ಮದೊಂದಿಗೆ ಕಾರ್ಯನಿರ್ವಹಿಸಲಿದೆ. ಕಾರ್ಯಕ್ರಮದಲ್ಲಿ ಉಚಿತ ದಾಸೋಹ ಇರಲಿದೆ ಎಂದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರೊಂದಿಗೆ ಸೇರಿದಂತೆ ಗ್ರಾಮೀಣ ಭಾಗಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಂದು ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನ ಸಹ ಇರುವುದರಿಂದ ಪಕ್ಷದ ಕಾರ್ಯಕರ್ತರು ಸಹ ಆಗಮಿಸಿ ಅವರಿಗೆ ಶುಭ ಕೋರುವ ಕೆಲಸ ಮಾಡಬೇಕು ಮಾಡಬೇಕು ಎಂದು ಹೇಳಿದರು. ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಮುಖಂಡರಾದ ಸೋಮಣ್ಣ, ಪುಟ್ಟಬುದ್ದಿ, ರಾಜೇಶ್, ಕುಮಾರ್, ಮಹದೇವಣ್ಣ, ಗಣೇಶ ಪಾಲ್ಗೊಂಡಿದ್ದರು.1
- ಮಳವಳ್ಳಿಯಲ್ಲಿ ಸುತ್ತೂರು ಜಯಂತಿ-ಡಿ.೧೬ರAದು ರಾಷ್ಟçಪತಿ ಅಗಮನ -ಭದ್ರತೆ ತಂಡದಿAದ ಹೆಲಿಕ್ಯಾಪ್ಟರ್ ಅಣಕು ಪ್ರದರ್ಶನ ಮಳವಳ್ಳಿ ಪಟ್ಟಣದಲ್ಲಿ ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವ ಡಿ.೧೫ ರಿಂದ ಅರಂಭವಾಗಲಿದ್ದು,ಡಿ.೧೬ ರಂದು ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಕಾರ್ಯಕ್ರಮ ಉದ್ಘಾಟಿಸುವ ಹಿನ್ನೆಲೆಯಲ್ಲಿ ದೆಹಲಿ ಭದ್ರತಾ ಪಡೆ ಅಧಿಕಾರಿಗಳು ಬಾನುವಾರ ಮಾರೆಹಳ್ಳಿ ಬಳಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ಜಾಗದಲ್ಲಿ ಹೆಲಿಕ್ಯಾಪ್ಟರ್ ಅಣಕು ಪ್ರದರ್ಶನ ನಡೆಸಿದರು. ಮಾರೆಹಳ್ಳಿ ಬಳಿ ಮಾಜಿ ಕೇಂದ್ರ ಸಚಿವರಾದ ದಿ.ಎಂ.ವಿ.ಚAದ್ರಶೇಖರಮೂರ್ತಿಯವರಿಗೆ ಸೇರಿದ ಜಾಗದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು,ಭಾನುವಾರ ದೆಹಲಿ ಭದ್ರತಾ ಪಡೆ ಅದಿಕಾರಿಗಳ ತಂಡ ಜಿಲ್ಲಾಧಿಕಾರಿ ಡಾ.ಕುಮಾರ್ ನೇತೃತ್ವದಲ್ಲಿ ಅಗಮಿಸಿ ಹೆಲಿಕ್ಯಾಪ್ಟರ್ ಅಣಕು ಪ್ರದರ್ಶನ ನಡೆಸಿ ರಾಷ್ಟçಪತಿಗಳು ಬಂದಾಗ ಎಲ್ಲಿ ಯಾವ ರೀತಿ ಲ್ಯಾಂಡಿಗ್ ಮಾಡುವುದರ ಕುರಿತು ಪ್ರಯೋಗಿಕ ಪ್ರದರ್ಶನ ನಡೆಸಿದರು.1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1