logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶ್ರೀ ಪುರಂದರ ದಾಸರ ಕೀರ್ತನೆಗಳು:- *ಹರಿದಾಸ ಹೃದಯ* *ಇದು ಭಾಗ್ಯ* ಶ್ರೀಪುರಂದರದಾಸರ ಜೀವನದ ಕ್ಷಣಗಳು, ಬರಹದ ಅಕ್ಷರಗಳು, ಉದ್ಭೋದಕ ಹಾಗೂ ಚಿಂತನೀಯ. . ಇವರ ಕೃತಿ- *ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ll* ಕೀರ್ತನೆಯ ಮೊದಲ ಸಾಲಿನಲ್ಲಿ *ಇದು* ಹಾಗೂ *ಭಾಗ್ಯ* ಪದಗಳು ಮೂರು ಸಲ ಬಂದಿದೆ. ಇದನ್ನೆಲ್ಲೂ ಕಾಣೆವು. ಅಲ್ಲದೆ ಇದರ ಪ್ರಯೋಗ ಪರಿಕಲ್ಪನೆ ಊಹಾತೀತ. ಇದು ಭಾಗ್ಯ ಎಂಬುದರ ಪುನರುಕ್ತಿಗೆ ಕಡೆ ಎಂಬುದಿಲ್ಲವೆಂದು ತಿಳಿಯಬೇಕು. ಈ ಕರ್ಮಭೂಮಿಯಾದ ಭರತಖಂಡದಲ್ಲಿ ಜನಿಸಿದ್ದು ಇದು ಭಾಗ್ಯ. ಈ ಜನ್ಮ ಪಡೆದದ್ದು, ಈ ದೇಹದ ಸಂಪಾದನೆ, ದುರ್ಲಭವಾದ ಈ ವೈಷ್ಣವತ್ವ, ಈ ಸಿದ್ಧಾಂತಾನುಯಾಯಿತ್ವ; ಈ ಸಂಸ್ಕಾರ - ಪರಂಪರೆ, ಈ ಕಾಲ ದೇಶಗಳು, ಈ ಯತಿವರೇಣ್ಯರ ಹಾಗೂ ಹರಿದಾಸರ ಪರಂಪರೆ ಸಿಕ್ಕದ್ದು, ಇಂತಹ ಪರಿಸರ ... ಒಂದೆ ಎರಡೆ, ಇವೆಲ್ಲಾ ಭಾಗ್ಯವಲ್ಲವೆ ?  ಈ ಜನುಮದಲ್ಲಿ, ಮುಂದಿನ ಜನುಮಗಳಲ್ಲಿಯೂ ಈ ಭಾಗ್ಯಹೊಂದಲು ನಾವು ಹೇಗಿರಬೇಕೆಂಬ ಪಟ್ಟಿಯನ್ನೇ ಕೊಡುವರು.  *ಕಲ್ಲಾಗಿ ಇರಬೇಕು ಕಠಿಣಭವ ತೊರೆಯೊಳಗೆ* *ಬಿಲ್ಲಾಗಿ ಇರಬೇಕು ಬಲ್ಲವರೊಳು l* *ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು* *ಬೆಲ್ಲವಾಗಿರಬೇಕು ಬಂಧು ಜನರೊಳಗೆ ll 1 ll* * *ಬುದ್ಧಿಯಲಿ ತನುಮನವ ತಿದ್ದಿಕೊಳ್ಳಲಿ ಬೇಕು* *ಮುದ್ದಾಗಿ ಇರಬೇಕು ಮುನಿಯೋಗಿಗಳಿಗೆ l* *ಮಧ್ವಮತಾಭ್ಧಿಯೊಳು ಮೀನಾಗಿ ಇರಬೇಕು* *ಶುದ್ಧನಾಗಿರಬೇಕು ಕರಣ ತ್ರಯಗಳಲಿ ll 2 ll* #vultureculture #bone #davidboreanaz #temperancebrennan #bon #s #seeleybooth #halloween #death #anatomy #odditiesandcuriosities #bonestv #artist #bonespersonalizados #nature #goth #curiosities #boothandbrennan #bonestvshow #boneart #gothic #osteology *ವಿಷಯ ಭೋಗದ ತೃಣಕೆ ಉರಿಯಾಗಿರಲು ಬೇಕು* *ನಿಶಿ ಹಗಲು ಹರಿಯ ನೆನೆಯ ಬೇಕು l* *ವಸುಧೇಶ ಪುರಂದರವಿಟ್ಠಲರಾಯನ* *ಹಸನಾದ ದಾಸರನು ಸೇವಿಸಲು ಬೇಕು ll 3 ll* ದಾಸರು ಸಿದ್ಧಾಂತದ ತತ್ತ್ವಗಳೊಂದಿಗೆ ಜೀವನ ಸಾಗಿಸಿ ಪಾವನವನ್ನಾಗಿಸಲು ತಮ್ಮ ಶೈಲಿಯಲ್ಲಿ ಹಿತವಚನಗಳನ್ನು ಸಾದರಪಡಿಸಿರುವರು. ಇವುಗಳ ಪಾಲನೆಗೆ ಅವರ ಅನುಗ್ರಹ ಬೇಡೋಣ. ದಾಸನೆಂತಾಗುವೆನು ಧರೆಯೊಳಗೆ ನಾನು'* ಎಂದು ತಮ್ಮ ಅಳಲನ್ನು ತೋಡಿಕೊಂಡರು.  *ದಾಸನ್ನ ಮಾಡಿಕೊ ಎನ್ನ ಸ್ವಾಮಿ l* *ಸಾಸಿರ ನಾಮದ ವೆಂಕಟರಮಣ ll ಪ ll* ಹೇ ಸ್ವಾಮಿ !  ನೀನು ಈಶ, ಅದಕ್ಕೇ ನನ್ನನ್ನು ದಾಸನನ್ನಾಗಿಸಿಕೊಂಡು ಉದ್ಧರಿಸೆಂದು ಬೇಡಿದರು ದಾಸರು.  *'ದಾಸನ್ನ ಮಾಡಿಕೊ ಎನ್ನ'* ಈ ಕೂಗು ಎಲ್ಲ ಸಜ್ಜನರದ್ದಾಗಲೆಂದು ದಾಸರು ಸೂಚಿಸುವರು.   *ದುರುಳ ಬುದ್ಧಿಗಳನ್ನೆಲ್ಲ ಬಿಡಿಸೋ ನಿನ್ನ* *ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ* *ಚರಣ ಸೇವೆ ಎನಗೆ ಕೊಡಿಸೊ ಅಭಯ* *ಕರಪುಷ್ಪ ಎನ್ನಯ ಶಿರದೊಳು ಮುಡಿಸೊ ll 1 ll* ಜೀವನವನ್ನು ಸನ್ಮಾರ್ಗದಲ್ಲಿ ರೂಪಿಸಿಕೊಳ್ಳಲು ಆಡಿದ ಮಾತುಗಳಿವು.  'ನಾನು ನಿಜಾರ್ಥದಲ್ಲಿ ದಾಸನೆನಿಸಲು, ನನ್ನಲ್ಲಿರುವ ದೋಷಗಳನ್ನು ನೀನೇ ನಿವಾರಿಸು' ಎನ್ನುವರು.   *ದೃಢಭಕ್ತಿ ನಿನ್ನಲ್ಲಿ ಬೇಡಿ ದೇವ* *ಅಡಿಗೆರಗುವೆನಯ್ಯ ಅನುದಿನ ಪಾಡಿ l* *ಕಡೆಗಣ್ಣಲೇಕೆನ್ನ ನೋಡಿ ಬಿಡುವೆ l* *ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ ll 2 ll* ಶ್ರೀಹರಿಯ ಒಲುಮೆ ಬೇಕಾದಲ್ಲಿ ಅವನಲ್ಲಿ ಅಚಲವಾದ, ನೀರ್ವ್ಯಾಜಭಕ್ತಿ ಇರಬೇಕು.   *ಮೊರೆಹೊಕ್ಕವರ ಕಾಯ್ವ ಬಿರುದು ನೀ* *ಮರೆಯದಲೆ ರಕ್ಷಣೆ ಮಾಡೆನ್ನ ಪೊರೆದು* *ದುರಿತ ರಾಶಿಗಳೆಲ್ಲ ತರಿದು ಸ್ವಾಮಿ* *ಪುರಂದರವಿಟ್ಠಲ ಕರುಣದಿ ಕರೆದು ll 3 ll - ಶ್ರೀಪುರಂದರದಾಸರು.* 'ಶ್ರೀಹರಿ ಭಕ್ತವತ್ಸಲ, ಅನಿಮಿತ್ತಬಂಧು, ಕರುಣಾಸಾಗರ, ದಯಾಮಯ, ಪರಮಾಪ್ತ ಇಂತೆಲ್ಲಾ ವಾಸ್ತವಿಕೆ ಇರಲು ನನ್ನನ್ನು ನಿನ್ನ ಭಕ್ತನೆಂದು ಪರಿಗಣಿಸಿ ರಕ್ಷಿಸು ದೇವ' ಎಂದು ಕೇಳುವರು.   * * * * * * *ನಿನ್ನ ಕರುಣವೆ ಶುಭ ನಿನ್ನ ಕರುಣವೆ ಲಾಭ l ಮೊ.ಶೇ.* * * * * * * *ಹರಿದಾಸ ಹೃದಯ ಗ್ರಂಥದಿಂದ* *ದಿನಕ್ಕೊಂದು ಹರಿದಾಸರ ಸವಿನುಡಿ*- *ಸಾಧನ ಸಂದೇಶ* *ಸುಮತಿ-ಸುಮನ-ಸುಬಾಳಿಗೆ ಮೌಲ್ಯಗಳು* *ಪ್ರಕಾಶನ - ಶ್ರೀಮಾಧ್ವಗ್ರಂಥ ಪ್ರಕಾಶನ - ಬೆಂಗಳೂರು* ಆರತಿಯ ಬೆಳಗಿರೆ ll ಪ ll ಅರಸಿ ರುಕ್ಮಿಣಿ ಕೂಡ ಅರಸು ವಿಟ್ಠಲಗೆ ಬಿರುದಿನ ಶಂಖವ ಪಿಡಿದ ವಿಟ್ಠಲಗೆ ll ಸರಸಿಜಸಂಭವ ಸನ್ನುತ ವಿಟ್ಠಲಗೆ ನಿರುತ ಇಟ್ಟಿಗೆ ಮೇಲೆ ನಿಂತ ವಿಟ್ಠಲಗೆ ll 1 ll ದಶರಥರಾಯನ ಉದರದಿ ವಿಟ್ಠಲ ಶಿಶುವಾಗಿ ಜನಿಸಿದ ಶ್ರೀರಾಮ ವಿಟ್ಠಲ ll ಪಶುಪತಿ ಗೋಪಿಯ ಕಂದನೆ ವಿಟ್ಠಲ ಅಸುರೆ ಪೂತನಿಯ ಕೊಂದ ವಿಟ್ಠಲಗೆ ll 2 ll ಕಂಡಿರ ಬೊಬ್ಬುರ ವೆಂಕಟವಿಟ್ಠಲನ ಅಂಡಜವಾಹನ ಅಹುದೋ ನೀ ವಿಟ್ಠಲ ll ಪಾಂಡುರಂಗ ಕ್ಷೇತ್ರ ಪಾವನ ವಿಟ್ಠಲ ಪುಂಡರೀಕಾಕ್ಷ ಶ್ರೀಪುರಂದರವಿಟ್ಠಲಗೆ ll 3 ll ರಾಗ - : ತಾಳ - ದೇವಕಿನಂದನ ಮುಕುಂದ ll ಪ ll ನಿಗಮೋದ್ಧಾರ - ನವನೀತ ಚೋರ l ಖಗಪತಿವಾಹನ ಜಗದೋದ್ಧಾರ ll 1 ll ಶಂಖ - ಚಕ್ರಧರ - ಶ್ರೀ ಗೋವಿಂದ l ಪಂಕಜಲೋಚನ ಪರಮಾನಂದ ll 2 ll ಮಕರಕುಂಡಲಧರ - ಮೋಹನವೇಷ l ರುಕುಮಿಣಿವಲ್ಲಭ ಪಾಂಡವಪೋಷ ll 3 ll ಕಂಸಮರ್ದನ - ಕೌಸ್ತುಭಾಭರಣ l ಹಂಸವಾಹನ ಪೂಜಿತ ಚರಣ ll 4 ll ವರವೇಲಾಪುರ ಚೆನ್ನಪ್ರಸನ್ನ l ಪುರಂದರವಿಟ್ಠಲ ಸಕಲಗುಣಪೂರ್ಣ ll 5 ll ರಾಗ - : ತಾಳ -  ಮಂಗಳಂ ಜಯಮಂಗಳಂ ll ಪ ll ವಾತಸುತ ಹನುಮನ ಒಡೆಯಗೆ ಮಂಗಳ  ದಾತ ಶ್ರೀ ರಘುಪತಿಗೆ ಮಂಗಳ ll ಸೇತುವೆಗಟ್ಟಿದ ರಾಯಗೆ ಮಂಗಳ ಸೀತಾರಮಣಗೆ ಶುಭ ಮಂಗಳ ll 1 ll ಬಿಲ್ಲ ಹಿಡಿದು ಬಲು ಬಿಂಕದ ದೈತ್ಯರ ಹಲ್ಲು ಮುರಿದವಗೆ ಮಂಗಳ ll ಕಲ್ಲಾದಹಲ್ಯೆಯನುದ್ಧಾರ ಮಾಡಿದ ಬಲ್ಲಿದ ದಾಶರಥಿಗೆ ಮಂಗಳ ll 2 ll ಹರಧನು ಮುರಿದ ವಿನೋದಿಗೆ ಮಂಗಳ ವರದ ತಿಮ್ಮಪ್ಪಗೆ ಮಂಗಳ ll ಪುರಂದರವಿಟ್ಠಲರಾಯಗೆ ಮಂಗಳ ಸರುವೋತ್ತಮನಿಗೆ ಶುಭಮಂಗಳ ರಾಗ - : ತಾಳ - ಆರತಿಯ ಬೆಳಗಿರೆ ll ಪ ll ಅರಸಿ ರುಕ್ಮಿಣಿ ಕೂಡ ಅರಸು ವಿಟ್ಠಲಗೆ ಬಿರುದಿನ ಶಂಖವ ಪಿಡಿದ ವಿಟ್ಠಲಗೆ ll ಸರಸಿಜಸಂಭವ ಸನ್ನುತ ವಿಟ್ಠಲಗೆ ನಿರುತ ಇಟ್ಟಿಗೆ ಮೇಲೆ ನಿಂತ ವಿಟ್ಠಲಗೆ ll 1 ll ದಶರಥರಾಯನ ಉದರದಿ ವಿಟ್ಠಲ ಶಿಶುವಾಗಿ ಜನಿಸಿದ ಶ್ರೀರಾಮ ವಿಟ್ಠಲ ll ಪಶುಪತಿ ಗೋಪಿಯ ಕಂದನೆ ವಿಟ್ಠಲ ಅಸುರೆ ಪೂತನಿಯ ಕೊಂದ ವಿಟ್ಠಲಗೆ ll 2 ll ಕಂಡಿರ ಬೊಬ್ಬುರ ವೆಂಕಟವಿಟ್ಠಲನ ಅಂಡಜವಾಹನ ಅಹುದೋ ನೀ ವಿಟ್ಠಲ ll ಪಾಂಡುರಂಗ ಕ್ಷೇತ್ರ ಪಾವನ ವಿಟ್ಠಲ ಪುಂಡರೀಕಾಕ್ಷ ಶ್ರೀಪುರಂದರವಿಟ್ಠಲಗೆ ll 3 ll . ರಾಗ - : ತಾಳ - ಇನ್ನೇಕೆ ಯಮನ ಬಾಧೆಗಳು ? l ಎನ್ನ ಜಿಹ್ವೆಯೊಳಗೆ ಹರಿನಾಮವಿರಲು ll ಪ ll ಪತಿತ ಪಾವನನೆಂಬ ನಾಮ-ಸಕಲ l ಶ್ರುತಿತತಿಗಳಿಗೆಲ್ಲ ನಿಲುಕದೀ ನಾಮ ll ಕ್ರುತುಕೋಟಿ ಫಲ ಒಂದೇ ನಾಮ-ಸದ್ l ಗತಿಗೆ ಸಂಗಡ ಬಾಹೋದಲೆ ದಿವ್ಯನಾಮ ll 1 ll ಮುನ್ನ ಪ್ರಹ್ಲಾದನೆ ಸಾಕ್ಷಿ - ನಮ್ಮ l ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ll ಚೆನ್ನ ಅಜಮಿಳನೊಬ್ಬ ಸಾಕ್ಷಿ ಆ l ಉನ್ನಂತ ಲೋಕವಾಳುವ ಧ್ರುವ ಸಾಕ್ಷಿ ll 2 ll ಹದಿನಾಲ್ಕು ಲೋಕವಾಳುವ - ನಮ್ಮ l ಮದನ ಜನಕನಾಗಿ ಮಹಿಮೆ ತೋರುವ ll ಪದುಮನಾಭನಾಗಿ ಮೆರೆವ - ನಮ್ಮ l ಪುರಂದರವಿಟ್ಠಲನ ಹರುಷದಿ ಕರೆವ ll 3  ರಾಗ - : ತಾಳ -  ನಂಬಿದೆ ನಿನ್ನ ಪಾದವ, ವೆಂಕಟರಮಣ ನಂಬಿದೆ ನಿನ್ನ ಪಾದವ ll ಪ ll ನಂಬಿದೆ ನಿನ್ನ ಪಾದಾಂಬುಜಯುಗಳವ ಚಂದದಿ ಸಲಹೋ ಮಂದರಧರನೆ ll ಅ ಪ ll ತಂದೆಯು ನೀನೇ ತಾಯಿಯು ನೀನೇ ಬಂಧುಬಳಗವು ನೀನೆ ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ ಬಂದೆನ್ನ ಸಲಹೋ ಮುಕುಂದಮುರಾರಿ ll 1 ll ಚಿಕ್ಕಂದು ಮೊದಲು ನಾನು ನಿನ್ನಯ ಪಾದ ಹೊಕ್ಕು ಜೀವಿಸುತಿಹೆನು ಘಕ್ಕನೆ ಜ್ಞಾನವ ಅಕ್ಕರದಿಂದಲೆ ಕೊಡು ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ ll 2 ll ಮರೆತು ಮಾಯದೊಳು ಮುಳುಗಿದೆ ಮಾಯ- ವರಿತು ಅರಿಯದಾದೆ ಮರೆಯದೆ ಎನ್ನನು ಸಲಹೊ ಕೃಪಾನಿಧಿ ವರದ ಶ್ರೀವೆಂಕಟ ಪುರಂದರವಿಠಲ ll 3 ll ರಾಗ - : ತಾಳ - ಏನ ಪೇಳಲಿ ನಾನು ಕೃಷ್ಣನ  ಮಹಿಮೆ, ಯಾರಿಗೂ ತಿಳಿಯದಮ್ಮ ll ಪ ll ಹೊತ್ತಾರೆದ್ದು ಯಶೋದೆ ಮುತ್ತು ಪೋಣಿಸುತ್ತಿದ್ದಳು,  ಹತ್ತಿರಿದ್ದ ಕೃಷ್ಣ ಬಂದು ಒಂದು ಮುತ್ತು ತೆಗೆದುಕೊಂಡು  ಸುತ್ತಲಿದ್ದ ಹುಡುಗರ ಸಹಿತ ಹಿತ್ತಲೊಳಗೆ ಬಿತ್ತಿ ಹೋದ ll ಅ ಪ ll ಪರಿಪರಿ ಚಿಂತೆಯಿಂದ ಯಶೋದೆ ಗೋಪ್ಯರ ಕಳುಹಿದಳು,  ಸಂದು ಸಂದಲ್ಲಿ ಹುಡುಕಿ ಹುಡುಕಿ ಕಂದ ಕಾಣನೆಂದು ಬರಲು,  ಒಂದು ಕ್ಷಣದಲ್ಲಿ ಕೃಷ್ಣ ಬಂದು ಎದುರಾಗಿ ನಿಂದ ಕಂದ ll 1 ll ಕಂದಯ್ಯನ ಕರವ ಪಿಡಿದು, ಯಶೋದೆ ಕರೆ ತಂದಳು ಮನೆಗೆ,  ಕಂದ ಬಹಳ ಹಸಿದನೆಂದು ತುತ್ತು ಮಾಡಿ ಉಣಿಸಿದಳು,  ಕಂದ ಮುತ್ತು ತೋರಿಸು ಚಂದಿರ ನೀನೆಂದು ಮುದ್ದಿಸಿದಳು ll 2 ll ತಾಯ ಕರೆದು ಹಿತ್ತಲೊಳಗೆ ಮುತ್ತಿನ ಗಿಡವ ತೋರಿಸಿದ  ಪಂಟೆ ಪಂಟೆಗೆ ಎಂಟು ಎಂಟು ಗೊಂಚು ಗೊಂಚು ಜೋಲುತಿರಲು,  ಕಡಿದು ಕಡಿದು ರಾಶಿ ಹಾಕಿದ ಪರಮ ಪುರಂದರ ವಿಠಲರಾಯ ll 3 ll ರಾಗ - : ತಾಳ - ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಎನು ಮನವೆ ll ಪ ll ನಾರಾಯಣನೆಂಬೊ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ll ಅ ಪ ll ತರಳ ಧ್ರುವನಿಂದ ಅಂಕುರಿಸಿತು ಅದು ವರ ಪ್ರಹ್ಲಾದನಿಂದ ಮೊಳಕೆಯಾಯಿತು ಧರಣೀಶ ರುಕುಮಾಂಗದನಿಂದ ಚಿಗುರಿತು ಕುರು ಪಿತಾಮಹನಿಂದ ಹೂವಾಯಿತು ll 1 ll ವಿಜಯನ ಸತಿಯಿಂದ ಫಲವಾಯಿತು ಅದು ಗಜರಾಜನಿಂದ ದೋರೆ ಹಣ್ಣಾಯಿತು ದ್ವಿಜ ಶುಕಮುನಿಯಿಂದ ಫಲಪಕ್ವವಾಯಿತು ಅಜಮಿಳ ತಾನುಂಡು ರಸ ಸವಿದ ll 2 ll ಹೂವುಗಳು ಸರ ಎಂದು ಧರಿಸುವಿರಾ? ಎಚ್ಚರಿಕೆ! Would you wear a garland of flowers? Warning! ಹೂವುಗಳು ಸರ ಎಂದು ಧರಿಸುವಿರಾ? ಎಚ್ಚರಿಕೆ! #bones #skull #skulls #skeleton #art #oddities #taxidermy #emilydeschan ಕಾಮಿತ ಫಲವೀವ ನಾಮವೊಂದಿರಲಿಕ್ಕೆ ಹೋಮ ನೇಮ ಜಪ ತಪವೇಕೆ ಸ್ವಾಮಿ ಶ್ರೀ ಪುರಂದರವಿಟ್ಠಲನ ನಾಮವ ನೇಮದಿಂದ ನೀ ನೆನೆ ಮನವೆ ll 3 ll ರಾಗ - : ತಾಳ - ವೇಣುನಾದ ಬಾರೊ, ವೆಂಕಟರಮಣನೆ ಬಾರೊ l ಬಾಣನ ಭಂಜಿಸಿದಂಥ ಭಾವಜನಯ್ಯನೆ ಬಾರೊ ll ಪ ll ಪೂತನಿಯ ಮೊಲೆಯುಂಡ ನವ- l ನೀತ ಚೋರನೆ ಬಾರೊ ll ದೈತ್ಯರಾವಣನ ಸಂಹರಿಸಿದ l ಸೀತಾನಾಯಕ ಬಾರೊ ll 1 ll ಹಲ್ಲು ಮುರಿದು ಮಲ್ಲರ ಗೆದ್ದ l ಫುಲ್ಲನಾಭನೆ ಬಾರೊ ll ಗೊಲ್ಲತಿಯರೊಡನೆ ನಲಿವ l ಚೆಲ್ವ ಮೂರುತಿ ಬಾರೊ ll 2 ll ಮಂದಾರವನೆತ್ತಿದಂಥ l ಇಂದಿರಾ ರಮಣನೆ ಬಾರೊ ll ಕುಂದದೆ ಗೋವುಗಳ ಕಾಯ್ದ l ನಂದನಂದನನೆ ಬಾರೊ ll 3 ll ನಾರಿಯರ ಮನೆಗೆ ಪೋಪ l ವಾರಿಜಾಕ್ಷನೆ ಬಾರೊ ll ಈರೇಳು ಭುವನವ ಕಾಯ್ವ l ಮಾರನಯ್ಯನೆ ಬಾರೊ ll 4 ll ಶೇಷಶಯನ ಮೂರುತಿಯಾದ l ವಾಸುದೇವನೆ ಬಾರೊ ll ದಾಸರೊಳು ವಾಸವಾದ l ಶ್ರೀಶ ಪುರಂದರವಿಟ್ಠಲ ಬಾರೊ ll 5 ll ರಾಗ - : ತಾಳ - ರಾಮ ರಾಮ ರಾಮ ಎನ್ನಿರೋ ಇಂಥ ಸ್ವಾಮಿಯ ನಾಮವ ಮರೆಯದಿರೋ || ಪ. || ತುಂಬಿದ ಪಟ್ಟಣಕೆ ಒಂಭತ್ತು ಭಾಗಿಲು ಸಂಭ್ರಮದರಸರು ಐದು ಮಂದಿ ಡಂಭಕತನದಿಂದ ತಿರುಗುವ ಕಾಯವ ನಂಬಿ ನೆಚ್ಚಿ ನೀವು ಕೆಡಬೇಡಿರೊ || ೧ || ನೆಲೆ ಇಲ್ಲದೀ ಕಾಯ ಎಲುವಿನ ಪಂಜರ ಬಲಿದು ಸುತ್ತಿದ ಚರ್ಮದ ಹೊದಿಕೆ ಮಲ ಮೂತ್ರಂಗಳು ಕೀವು ಕ್ರಿಮಿಗಳುಳ್ಳ ಭರಿತ ದೇಹವ ನೆಚ್ಚಿ ಕೆಡಬೇಡಿರೊ || ೨ || ಹರ ಬ್ರಹ್ಮ ಸುರರಿಗೆ ವಂದಿತ ಆಗಿಪ್ಪ ಹರಿ ಸರ್ವೋತ್ತಮ ಒಬ್ಬನೇ ಕಾಣಿರೋ ಪುರಂದರವಿಠಲನ ಚರಣವ ಭಜಿಸಿರೊ ದುರಿತ ಭಯಗಳಿಂದ ದೂರಾಗಿರೊ || ೩ || *ತಂದೆಯಾಗಿ ತಾಯಿಯಾಗಿ ಇಂದಿರೇಶನೆ ಎನಗೆ* *ಬಂಧುವಾಗಿ ಬಳಗವಾಗಿ ಸಿಂಧುಶಯನನೆ ಎನಗೆ* *ಹಿಂದಾಗಿ ಮುಂದಾಗಿ ಮುಕುಂದನೆ ಎನಗೆ* *ಸ್ವಾಮಿಯಾಗಿ ಪ್ರೇಮಿಯಾಗಿ ರಾಮಚಂದ್ರನೆ ಎನಗೆ* *ಗುರುವಾಗಿ ದೈವವಾಗಿ ದೇವೋತ್ತಮನೆ ಎನಗೆ* *ವಿದ್ಯೆಯಾಗಿ ಬುದ್ಧಿಯಾಗಿ ವಿದ್ಯಾಪತಿಯೆ ಎನಗೆ* *ದಿಕ್ಕಾಗಿ ದೆಸೆಯಾಗಿ ರಕ್ಕಸಾಂತಕ ಎನಗೆ* *ಇಹವಾಗಿ ಪರವಾಗಿ ಶ್ರೀಕೃಷ್ಣ ನಮ್ಮ ಪೊರೆವ ll - ಶ್ರೀವ್ಯಾಸರಾಜರು* ಶ್ರೀಪುರಂದರದಾಸರು ಮಾರ್ಮಿಕವಾಗಿ ಭಗವಂತನೇ ಸರ್ವಸ್ವ ಎಂದದ್ದು ಹೀಗಿದೆ. ನೀನಿಲ್ಲದ ಜನವಿಲ್ಲ, ನೀನಿಲ್ಲದ ಗತಿಯಿಲ್ಲ. *ನಿನ್ನಂಥ ತಂದೆ ಎನಗುಂಟು ನಿನಗಿಲ್ಲ* *ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ* *ನಿನ್ನಂಥ ದೊರೆಯೊಬ್ಬ ಎನಗುಂಟು ನಿನಗಿಲ್ಲ* *ನೀನೆ ಪರದೇಶಿ ನಾನೆ ಸ್ವದೇಶಿ* *ನಿನ್ನ ಅರಸಿ ಲಕ್ಷ್ಮಿ ಎನಗೆ ತಾಯಿಯುಂಟು* *ಎನಗಿದ್ದ ತಾಯಿ ತಂದೆ ನಿನಗ್ಯಾರು* *ತೋರೋ ಪುರಂದರವಿಟ್ಠಲ ll - ಶ್ರೀಪುರಂದರದಾಸರು* ನಿತ್ಯವೂ ಎಲ್ಲರೂ ಭಗವಂತನಲ್ಲಿ ನಿವೇದಿಸಿಕೊಳ್ಳುವ ಸ್ತೋತ್ರ - *ತ್ವಮೇವ ಮಾತಾ ಚ ಪಿತಾ ತ್ವಮೇವ l ತ್ವಮೇವ ಬಂಧುಶ್ಚ ಸಖಾ ತ್ವಮೇವ ll* *ತ್ವಮೇವ ವಿದ್ಯಾ ದ್ರವಿಣಂ ತ್ವಮೇವ l ತ್ವಮೇವ ಸರ್ವಂ ಮಮ ದೇವ ದೇವ ll* *ತಾಯಿ ತಂದೆಯೆನ್ನ ಗುರು ದೈವ ನೀನೆ ಕೃಷ್ಣ l* *ಪಾಹಿ ಪಂಚಾಕ್ಷರ ಪರಮ ಪುಣ್ಯ ನೀನೆ ll - ಶ್ರೀಪುರಂದರದಾಸರು* ರಾಗ - : ತಾಳ - ಅರಿಯರು ಮನುಜರು ಅರಿತವರರಿಯರೊ l ಧರಿಗೆ ವಡೆಯ ಶ್ರೀ ಹರಿಯಲ್ಲದಿಲ್ಲವೆಂದು ll ಪ ll ನಾರದ ಮುನಿಬಲ್ಲ ವಾರಿಜೋದ್ಭವ ಬಲ್ಲ l ಪರಾಶರನು ಬಲ್ಲ ಮನುಬಲ್ಲನು l ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು l ಧಾರುಣಿಗರಸು ಶ್ರೀ ನಾರಾಯಣನೆಂದು ll 1 ll ಶಿವಬಲ್ಲ ಧ್ರುವಬಲ್ಲ ದ್ರೌಪದಿ ಬಲ್ಲಳು l ಅವನಿಪ ಜನಕರಾಯನು ಬಲ್ಲನು l ಯುವತಿಗೆ ವರವಿತ್ತ ಗೌತಮ ಬಲ್ಲನು l ಭವರೋಗ ವೈದ್ಯ ಶ್ರೀಹರಿಯಲ್ಲದಿಲ್ಲವೆಂದು ll 2 ll ಧಿಟ್ಟ ಪ್ರಹ್ಲಾದಬಲ್ಲ ಕೆಟ್ಟಜಾಮಿಳಬಲ್ಲ l ದೃಷ್ಟಾಂತ ಕಂಡ ಭೃಗು ಮುನಿಬಲ್ಲನು l ಕೊಟ್ಟ ಬಲಿಬಲ್ಲನು ಮೊರೆಯಿಟ್ಟ ಗಜೇಂದ್ರನು ಬಲ್ಲ l ಸೃಷ್ಟಿಗೆ ಪುರಂದರವಿಟ್ಠಲನೆ ದೈವವೆಂದು ll 3 ll [19/05, 05:32] +91 94485 58768: *ಹರಿದಾಸ ಹೃದಯ* *ವೈಶಾಖ ಬಹುಳ ಸಪ್ತಮಿ* *ಇದ್ದು ಜಯಿಸಿ* *ಈಸ ಬೇಕು ಇದ್ದು ಜಯಿಸಬೇಕು l* *ಹೇಸಿಕೆ ಸಂಸಾರದಲಿ ಆಶೆ ಲೇಶ ಇಡದ ಹಾಗೆ ll ಪ ll* ಹುಟ್ಟಿ ಬಂದ ಮನುಷ್ಯನಿಗೆ ಭರವಸೆ ನೀಡುವ, ಸವಾಲನ್ನೂ ಎದುರಿಸುವ, ಆತ್ಮವಿಶ್ವಾಸವನ್ನು ತುಂಬುವ ಬಹ್ವರ್ಥಗರ್ಭಿತವಾದ ಮಾತು ಇದಾಗಿದೆ. ಜೀವನದಲ್ಲಿ ಪ್ರತಿಯೊಬ್ಬರೂ ಎಂದಿಗೂ, ಎಂತಹ ಪರಿಸ್ಥಿತಿಯಲ್ಲೂ ಬದುಕಿಗೆ ಬೆನ್ನು ತೋರದೆ ಸುಖಬಾಳನ್ನು ಸಾಗಿಸಲು ದಾಸರು ಮುತ್ತಿನಂಥಹ ಮಾತನ್ನು ಆಡಿರುವರು. *ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು* *ಸ್ವಾಮಿ ರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ ll 1 ll* ಈ ಸಂಸಾರದಲ್ಲಿ *'ಇರಬೇಕು-ಇರದಿರಬೇಕು'* ಎಂದಂತೆ, ನೀರಲ್ಲೇ ಇರುವ ತಾವರೆ ಎಲೆ ಆ ನೀರನ್ನು ಅಂಟಿಸಿಕೊಳ್ಳದೆ ಇದ್ದಂತೆ ಮನುಷ್ಯ ಜೀವನ ಸಾಗಿಸಬೇಕು. ಈ ನಿರ್ಲಿಪ್ತತೆಯೊಂದಿಗೆ ಭಗವಂತನ ಲಿಪ್ತತೆ ಇರಬೇಕು ಎನ್ನುವರು. ಇದು ಸುಖಜೀವನದ ಗುಟ್ಟು ಎನ್ನುವರು. *ಗೇರು ಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ* *ಮೀರಿ ಆಶೆ ಮಾಡದ ಹಾಗೆ ಧೀರಕೃಷ್ಣನ ನೆನೆಯುವರೆಲ್ಲ ll 2 ll* ಸಂಸಾರವನ್ನು ತೊರೆದು ಹೊರಬರಲಾಗದು. ಇರಬೇಕು, ಅಂಟಿಕೊಂಡಿರಬಾರದು. ಇದೊಂದು ಯೋಗ (ಕರ್ಮದಲ್ಲಿ ಕುಶಲತೆ). ಆದರೆ ಭಗವಂತನೊಂದಿಗೆ ಅಂಟಿರಬೇಕು. ನಿಜಾರ್ಥದಲ್ಲಿ ಇದು ಸಂಸಾರ ಜಯ. ಎಂದಿಗೂ ಯೋಗ್ಯತೆಗೆ ಮೀರಿದ ಆಶೆ - ಕಾಮನೆ ನಿಷಿದ್ಧ. ಹೇಗೆ ಗೇರುಬೀಜ ಅಂಟಿಕೊಳ್ಳದೆ ಅದರಲ್ಲೇ ಇದ್ದಂತೆ ಎಂದರು.   *ಮಾಂಸದಾಸೆಗೆ ಮತ್ಸ್ಯವು ಸಿಲುಕಿ ಹಿಂಸೆಪಟ್ಟ ಪರಿಯೊಳು* *ಮೋಸ ಹೋಗದೆ ಪುರಂದರವಿಟ್ಠಲ ಜಗದೀಶನೆನುತ ಕೊಂಡಾಡುವರೆಲ್ಲ ll 3 ll* ಸಂಸಾರ ಕಾಮನೆಗಳ ಗೂಡು. ಅದರಲ್ಲೂ ಚಾಪಲ್ಯವೆಂಬುದು ಬಿಡಲಾಗದ ರೋಗ. ಉದಾಹರಣೆಗೆ ಮೀನು. ಜಿಹ್ವಾ ಚಾಪಲ್ಯದಿಂದ ಸಾಯುತ್ತೆ. ಧನ - ಹೆಣ್ಣು - ಮಣ್ಣುಗಳಿಗಾಗಿ ಹೊಡೆದಾಡಿ, ಸೆಣಸಾಡಿ ಬಾಳುವುದೇ ಹೇಸಿಗೆ ಸಂಸಾರ. ಇವುಗಳಿಂದ ದೂರವಿದ್ದು ಬದುಕುವುದೇ ಸಂಸಾರದಲ್ಲಿ ಈಜಾಡಿ ಜಯಗಳಿಸುವುದು. ಈ ರಹಸ್ಯವನ್ನು ದಾಸರು ಉಪಮಾನಗಳಿಂದ ಬಣ್ಣಿಸಿರುವರು. ಶ್ರೀಪುರಂದರರು ಸಾಧನ ಜೀವಿಗೆ ನೀಡಿದ, ಆತ್ಮವಿಶ್ವಾಸವನ್ನೂ ತುಂಬಿದ ಮಾತುಗಳಾಗಿವೆ. ಈ ಸಂಸಾರಕ್ಕೆ ಅಂಟಿಕೊಳ್ಳದೆ, ಆಶೆ ಲೇಶ ಇರದ ಹಾಗೆ ಇದ್ದು ಜಯಿಸಿರೆಂದರು. ಸಂಸಾರಕ್ಕೆ ಅಂಜಿ ಎಂದಿಗೂ ಹೇಡಿಯಂತೆ ಬೆನ್ನು ಮುಖ ಮಾಡದೆ, ಮರ್ಮವನ್ನು ಅರಿತು, ಭಗವಂತನ ಮೇಲೆ ಭಾರಹಾಕಿ ಇದ್ದು ಜಯಿಸಿರೆಂದು ಅಭಯವಿತ್ತರು. ಆತ್ಮವಿಶ್ವಾಸ ತುಂಬಿದರು. #Chetha #Muniswamy #gowda #Riya #YOGI #ChethanaMuniswamygowda   *ಚರಣ ಸೇವಕನಲ್ಲಿ ಕರುಣ ಬಾರದ್ಯಾಕೆ ? - ಶ್ರೀನ.* *ಅನ್ನದಾನಕ್ಕೆ ಮಿಗಿಲಿಲ್ಲ* *'ಅತ್ತೃತ್ವಾತ್ ಸರ್ವಲೋಕಾನಂ ಅನ್ಯಮಿತ್ಯುಚ್ಯತೇ ಹರಿಃ' l* ಎಲ್ಲ ಕಾಲಕ್ಕೂ ಎಲ್ಲರಿಗೂ ತರ್ಪಕ, ತೃಪ್ತಿ ನೀಡುವವನು, ಅಣ್ಣದಲ್ಲಿ ಸನ್ನಿಹಿತನಾಗಿ ಆ ಹೆಸರಿನವನಾದ ಭಗವಂತ.  ಜಗತ್ತಿನಲ್ಲಿ ಎಲ್ಲರೂ ಎಲ್ಲ ಪ್ರಾಣಿಗಳೂ ಅನ್ನಕ್ಕೆ ಅರ್ಹರೇ. ಅನ್ನ - ನೀರನ್ನು ಯಾರಿಗೂ ಇಲ್ಲ ಎಂದೆನಬಾರದೆಂದು ಶಾಸ್ತ್ರವಿಧಿಯಿದೆ. ಶ್ರೀಪುರಂದರರ ಮಾತು ಹೀಗಿದೆ. *ಚೋರನಾದರು ಚಾಂಡಾಲನಾದರು ಬ್ರಹ್ಮಘ್ನ ಪಿತೃ ಘಾತಕಿಯಾದರು* *ಆವನಾದರು ಮಧ್ಯಾನ್ಹ ಕಾಲಕ್ಕೆ ಅತಿಥಿಯಾಗಿ ಮನೆಗೆ ಬಂದರೆ* *ತುತಿಸಿ ಅನ್ನವನಿಟ್ಟು ಸ್ವಾಮಿ ಪುರಂದರವಿಟ್ಠಲಗರ್ಪಿಸಬೇಕು ll - ಶ್ರೀಪುರಂದರದಾಸರು* ಶ್ರೀವಿಜಯದಾಸರೂ ತಮ್ಮ ಒಂದು ಸುಳಾದಿಯಲ್ಲಿ ಅನ್ನದ ಬಗ್ಗೆ ಹೇಳುವಾಗ - *ಅನ್ನ ಇತ್ತರೆ ಅದು ಭವನವಾಗಿ ತೋರುವದು* *ಅನ್ನ ನೀಯದಿರೆ ಅದು ಕಾನನಕೆ ಸರಿ ಎನ್ನಿ* *ಅನ್ನದಿಂದಲಿ ಬಂದ ಘನದುರಿತಹರ ಕಾಣೋ* *ಅನ್ನದಿಂದಲಿ ಸರ್ವಪೂರ್ಣ ಫಲಿಸುವದು* *ಅನ್ನ ಇತ್ತವನ ಕೀರ್ತಿ ಉನ್ನತವಾಗಿ, ತ್ರಿಭು* *ವನದೊಳಗೆ ತುಂಬಿ ಚೆನ್ನಾಗಿ ಪೊಳೆಪದಯ್ಯ* *ಅನ್ನದಾನಕ್ಕಿಂತ ಇನ್ನು ಮಿಗಿಲು ದಾನಗಳಿಲ್ಲ* *ಹೊನ್ನು ಹಣ ಕೊಡಲು, ಆ ಗಣ್ಯ ಅನ್ನದಾನಕ್ಕೆ* *ಅನಂತಕಾಲ ಮುಖವನ್ನೆ ಮಾಡಲು ವಿಪ್ರ* *ಗುಣಿಸಿದುದಕೆ ಸರಿಯೆನ್ನಬಹುದೆ ತಿಳಿದು* *ಅನಂತ ಮೂರುತಿ ವಿಜಯವಿಟ್ಠಲರೇಯ* *ತನ್ನವನಿವನೆಂದು ಮನ್ನಿಸಿ ಸಲಹುವ ll - ಶ್ರೀವಿಜಯದಾಸರು* ಶ್ರೀ ಪುರಂದರರು ಅನ್ನದಾನವೆ ಮಿಗಿಲೆನ್ನಲು ಒಂದು ಉಗಾಭೋಗದಲ್ಲಿ ಹೀಗೆಂದರು, *ಅನ್ನಪಾನಾದಿಗಳೀಯೋ ಅಭ್ಯಾಗತ ಬ್ರಾಹ್ಮಣರಿಗೆ* *ಅನ್ನಪಾನಾದಿಗಳೀಯೋ ಆ ಚಾಂಡಾಲಸಪ್ತರಿಗೆ* *ಅನ್ನಪಾನಾದಿಗಳೀಯೋ ಅಂಧದೀನ ಕೃಪಣರಿಗೆ* *ಹಸಿವೆಗೆ ಹಾಗವನ್ನರ್ಪಿಸೋ ಪುರಂದರವಿಟ್ಠಲಗೆ ll - ಶ್ರೀಪುರಂದರದಾಸರು* ರಾಗ - : ತಾಳ - ರಾಮ ರಾಮ ರಾಮ ರಾಮ ರಾಮಯೆನ್ನಿರೋ l ರಾಮ ರಾಮಯೆಂಬ ನಾಮ ಮನದಿ ನೆನೆಯಿರೊ ll ಪ ll ಇಂದ್ರಿಯಂಗಳೆಲ್ಲ ಕೂಡಿ ಬಂದು ತನ್ನ ಮುಸುಕಿದಾಗ l ಸಿಂಧುಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು ll 1 ll ಭರದಿ ಯಮನ ಭಟರು ಬಂದು ಹೊರಡು ಎಂದು ಮುಟ್ಟಲು l ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ ll 2 ll ಕಾಸಶ್ವಾಸದಲ್ಲಿ ಸಿಲುಕಿ ದೋಷ ಬಲಿದು ಪೋಗುವಾಗ l ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ ll 3 ll ಶೃಂಗಾರವಾದ ದೇಹ ತಂಗಿಬಿಟ್ಟು ಪೋಗುವಾಗ l ಕಂಗಳಿಗಾತ್ಮ ಸೇರಿದಾಗ ರಂಗನ ಧ್ಯಾನ ದೊರಕದಯ್ಯ ll 4 ll ಕಷ್ಟಜನ್ಮದಲ್ಲಿ ಬಂದು ದುಷ್ಟಕರ್ಮಗಳನು ಮಾಡಿ l ಬಿಟ್ಟು ಹೋಗುವಾಗ ಪುರಂದರವಿಟ್ಠಲನ ನೆನೆಮನವೆ ll 5 ll https://youtu.be/lFtvDcLpsC8?feature=shared ರಾಗ - : ತಾಳ -  ನಂಬಿ ಕೆಟ್ಟವರುಂಟೆ - ಕೃಷ್ಣಯ್ಯನ l ನಂಬಲಾರದೆ ಕೆಟ್ಟರು ll ಪ ll ಅಂಬುಜನಾಭನ ಪಾದವ ನೆನೆದರೆ l ಇಂಬುಗೊಡದ ದುಃಖ ಹರಿಸುವ ಶ್ರೀಕೃಷ್ಣ ll ಅ ಪ ll ಬಲಿಯಪಾತಾಳಕಿಳುಹಿ - ಭಕ್ತನ ಬಾ - l ಗಿಲವ ಕಾಯುವೆ ನಾನೆಂದ ll ಛಲದೊಳು ಅಸುರರ ಶಿರಗಳ ತರಿದು ತಾ l ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಈ ಕೃಷ್ಣ ll 1 ll ತರಳ ಪ್ರಹ್ಲಾದಗೊಲಿದು - ಹಿರಣ್ಯಕನ ಉ - l ಗುರಿನಿಂದಲೆ ಸೀಳಿದ ll ಕರಿರಾಜಗೊಲಿದು ನೆಗಳು ನುಂಗುತಿರಲಾಗ l ಪರಿಹರಿಸಿದ ಜಲದೊಳು ಪೊಕ್ಕು ಶ್ರೀಕೃಷ್ಣ ll 2 ll ಪಾಂಡವರಿಗೆ ಒಲಿದು - ಕೌರವರನು l ತುಂಡು ಛಿದ್ರಮಾಡಿದೆ ll ಗಂಡರೈವರ ಮುಂದೆ ದ್ರೌಪದಿ ಕೂಗಲು l ಕಂಡು ಕರುಣದಿ ಕಾಯ್ದ ಪುರಂದರವಿಟ್ಠಲನ ll 3 ll https://youtube.com/shorts/EAxMa5OAMJc?si=0gcI2nGVmQOimNrA

on 27 August
user_Chethana Muniswamygowda
Chethana Muniswamygowda
Press advisory Shirhatti, Gadag•
on 27 August

ಶ್ರೀ ಪುರಂದರ ದಾಸರ ಕೀರ್ತನೆಗಳು:- *ಹರಿದಾಸ ಹೃದಯ* *ಇದು ಭಾಗ್ಯ* ಶ್ರೀಪುರಂದರದಾಸರ ಜೀವನದ ಕ್ಷಣಗಳು, ಬರಹದ ಅಕ್ಷರಗಳು, ಉದ್ಭೋದಕ ಹಾಗೂ ಚಿಂತನೀಯ. . ಇವರ ಕೃತಿ- *ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ll* ಕೀರ್ತನೆಯ ಮೊದಲ ಸಾಲಿನಲ್ಲಿ *ಇದು* ಹಾಗೂ *ಭಾಗ್ಯ* ಪದಗಳು ಮೂರು ಸಲ ಬಂದಿದೆ. ಇದನ್ನೆಲ್ಲೂ ಕಾಣೆವು. ಅಲ್ಲದೆ ಇದರ ಪ್ರಯೋಗ ಪರಿಕಲ್ಪನೆ ಊಹಾತೀತ. ಇದು ಭಾಗ್ಯ ಎಂಬುದರ ಪುನರುಕ್ತಿಗೆ ಕಡೆ ಎಂಬುದಿಲ್ಲವೆಂದು ತಿಳಿಯಬೇಕು. ಈ ಕರ್ಮಭೂಮಿಯಾದ ಭರತಖಂಡದಲ್ಲಿ ಜನಿಸಿದ್ದು ಇದು ಭಾಗ್ಯ. ಈ ಜನ್ಮ ಪಡೆದದ್ದು, ಈ ದೇಹದ ಸಂಪಾದನೆ, ದುರ್ಲಭವಾದ ಈ ವೈಷ್ಣವತ್ವ, ಈ ಸಿದ್ಧಾಂತಾನುಯಾಯಿತ್ವ; ಈ ಸಂಸ್ಕಾರ - ಪರಂಪರೆ, ಈ ಕಾಲ ದೇಶಗಳು, ಈ ಯತಿವರೇಣ್ಯರ ಹಾಗೂ ಹರಿದಾಸರ ಪರಂಪರೆ ಸಿಕ್ಕದ್ದು, ಇಂತಹ ಪರಿಸರ ... ಒಂದೆ ಎರಡೆ, ಇವೆಲ್ಲಾ ಭಾಗ್ಯವಲ್ಲವೆ ?  ಈ ಜನುಮದಲ್ಲಿ, ಮುಂದಿನ ಜನುಮಗಳಲ್ಲಿಯೂ ಈ ಭಾಗ್ಯಹೊಂದಲು ನಾವು ಹೇಗಿರಬೇಕೆಂಬ ಪಟ್ಟಿಯನ್ನೇ ಕೊಡುವರು.  *ಕಲ್ಲಾಗಿ ಇರಬೇಕು ಕಠಿಣಭವ ತೊರೆಯೊಳಗೆ* *ಬಿಲ್ಲಾಗಿ ಇರಬೇಕು ಬಲ್ಲವರೊಳು l* *ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು* *ಬೆಲ್ಲವಾಗಿರಬೇಕು ಬಂಧು ಜನರೊಳಗೆ ll 1 ll* * *ಬುದ್ಧಿಯಲಿ ತನುಮನವ ತಿದ್ದಿಕೊಳ್ಳಲಿ ಬೇಕು* *ಮುದ್ದಾಗಿ ಇರಬೇಕು ಮುನಿಯೋಗಿಗಳಿಗೆ l* *ಮಧ್ವಮತಾಭ್ಧಿಯೊಳು ಮೀನಾಗಿ ಇರಬೇಕು* *ಶುದ್ಧನಾಗಿರಬೇಕು ಕರಣ ತ್ರಯಗಳಲಿ ll 2 ll* #vultureculture #bone #davidboreanaz #temperancebrennan #bon #s #seeleybooth #halloween #death #anatomy #odditiesandcuriosities #bonestv #artist #bonespersonalizados #nature #goth #curiosities #boothandbrennan #bonestvshow #boneart #gothic #osteology *ವಿಷಯ ಭೋಗದ ತೃಣಕೆ ಉರಿಯಾಗಿರಲು ಬೇಕು* *ನಿಶಿ ಹಗಲು ಹರಿಯ ನೆನೆಯ ಬೇಕು l* *ವಸುಧೇಶ ಪುರಂದರವಿಟ್ಠಲರಾಯನ* *ಹಸನಾದ ದಾಸರನು ಸೇವಿಸಲು ಬೇಕು ll 3 ll* ದಾಸರು ಸಿದ್ಧಾಂತದ ತತ್ತ್ವಗಳೊಂದಿಗೆ ಜೀವನ ಸಾಗಿಸಿ ಪಾವನವನ್ನಾಗಿಸಲು ತಮ್ಮ ಶೈಲಿಯಲ್ಲಿ ಹಿತವಚನಗಳನ್ನು ಸಾದರಪಡಿಸಿರುವರು. ಇವುಗಳ ಪಾಲನೆಗೆ ಅವರ ಅನುಗ್ರಹ ಬೇಡೋಣ. ದಾಸನೆಂತಾಗುವೆನು ಧರೆಯೊಳಗೆ ನಾನು'* ಎಂದು ತಮ್ಮ ಅಳಲನ್ನು ತೋಡಿಕೊಂಡರು.  *ದಾಸನ್ನ ಮಾಡಿಕೊ ಎನ್ನ ಸ್ವಾಮಿ l* *ಸಾಸಿರ ನಾಮದ ವೆಂಕಟರಮಣ ll ಪ ll* ಹೇ ಸ್ವಾಮಿ !  ನೀನು ಈಶ, ಅದಕ್ಕೇ ನನ್ನನ್ನು ದಾಸನನ್ನಾಗಿಸಿಕೊಂಡು ಉದ್ಧರಿಸೆಂದು ಬೇಡಿದರು ದಾಸರು.  *'ದಾಸನ್ನ ಮಾಡಿಕೊ ಎನ್ನ'* ಈ ಕೂಗು ಎಲ್ಲ ಸಜ್ಜನರದ್ದಾಗಲೆಂದು ದಾಸರು ಸೂಚಿಸುವರು.   *ದುರುಳ ಬುದ್ಧಿಗಳನ್ನೆಲ್ಲ ಬಿಡಿಸೋ ನಿನ್ನ* *ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ* *ಚರಣ ಸೇವೆ ಎನಗೆ ಕೊಡಿಸೊ ಅಭಯ* *ಕರಪುಷ್ಪ ಎನ್ನಯ ಶಿರದೊಳು ಮುಡಿಸೊ ll 1 ll* ಜೀವನವನ್ನು ಸನ್ಮಾರ್ಗದಲ್ಲಿ ರೂಪಿಸಿಕೊಳ್ಳಲು ಆಡಿದ ಮಾತುಗಳಿವು.  'ನಾನು ನಿಜಾರ್ಥದಲ್ಲಿ ದಾಸನೆನಿಸಲು, ನನ್ನಲ್ಲಿರುವ ದೋಷಗಳನ್ನು ನೀನೇ ನಿವಾರಿಸು' ಎನ್ನುವರು.   *ದೃಢಭಕ್ತಿ ನಿನ್ನಲ್ಲಿ ಬೇಡಿ ದೇವ* *ಅಡಿಗೆರಗುವೆನಯ್ಯ ಅನುದಿನ ಪಾಡಿ l* *ಕಡೆಗಣ್ಣಲೇಕೆನ್ನ ನೋಡಿ ಬಿಡುವೆ l* *ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ ll 2 ll* ಶ್ರೀಹರಿಯ ಒಲುಮೆ ಬೇಕಾದಲ್ಲಿ ಅವನಲ್ಲಿ ಅಚಲವಾದ, ನೀರ್ವ್ಯಾಜಭಕ್ತಿ ಇರಬೇಕು.   *ಮೊರೆಹೊಕ್ಕವರ ಕಾಯ್ವ ಬಿರುದು ನೀ* *ಮರೆಯದಲೆ ರಕ್ಷಣೆ ಮಾಡೆನ್ನ ಪೊರೆದು* *ದುರಿತ ರಾಶಿಗಳೆಲ್ಲ ತರಿದು ಸ್ವಾಮಿ* *ಪುರಂದರವಿಟ್ಠಲ ಕರುಣದಿ ಕರೆದು ll 3 ll - ಶ್ರೀಪುರಂದರದಾಸರು.* 'ಶ್ರೀಹರಿ ಭಕ್ತವತ್ಸಲ, ಅನಿಮಿತ್ತಬಂಧು, ಕರುಣಾಸಾಗರ, ದಯಾಮಯ, ಪರಮಾಪ್ತ ಇಂತೆಲ್ಲಾ ವಾಸ್ತವಿಕೆ ಇರಲು ನನ್ನನ್ನು ನಿನ್ನ ಭಕ್ತನೆಂದು ಪರಿಗಣಿಸಿ ರಕ್ಷಿಸು ದೇವ' ಎಂದು ಕೇಳುವರು.   * * * * * * *ನಿನ್ನ ಕರುಣವೆ ಶುಭ ನಿನ್ನ ಕರುಣವೆ ಲಾಭ l ಮೊ.ಶೇ.* * * * * * * *ಹರಿದಾಸ ಹೃದಯ ಗ್ರಂಥದಿಂದ* *ದಿನಕ್ಕೊಂದು ಹರಿದಾಸರ ಸವಿನುಡಿ*- *ಸಾಧನ ಸಂದೇಶ* *ಸುಮತಿ-ಸುಮನ-ಸುಬಾಳಿಗೆ ಮೌಲ್ಯಗಳು* *ಪ್ರಕಾಶನ - ಶ್ರೀಮಾಧ್ವಗ್ರಂಥ ಪ್ರಕಾಶನ - ಬೆಂಗಳೂರು* ಆರತಿಯ ಬೆಳಗಿರೆ ll ಪ ll ಅರಸಿ ರುಕ್ಮಿಣಿ ಕೂಡ ಅರಸು ವಿಟ್ಠಲಗೆ ಬಿರುದಿನ ಶಂಖವ ಪಿಡಿದ ವಿಟ್ಠಲಗೆ ll ಸರಸಿಜಸಂಭವ ಸನ್ನುತ ವಿಟ್ಠಲಗೆ ನಿರುತ ಇಟ್ಟಿಗೆ ಮೇಲೆ ನಿಂತ ವಿಟ್ಠಲಗೆ ll 1 ll ದಶರಥರಾಯನ ಉದರದಿ ವಿಟ್ಠಲ ಶಿಶುವಾಗಿ ಜನಿಸಿದ ಶ್ರೀರಾಮ ವಿಟ್ಠಲ ll ಪಶುಪತಿ ಗೋಪಿಯ ಕಂದನೆ ವಿಟ್ಠಲ ಅಸುರೆ ಪೂತನಿಯ ಕೊಂದ ವಿಟ್ಠಲಗೆ ll 2 ll ಕಂಡಿರ ಬೊಬ್ಬುರ ವೆಂಕಟವಿಟ್ಠಲನ ಅಂಡಜವಾಹನ ಅಹುದೋ ನೀ ವಿಟ್ಠಲ ll ಪಾಂಡುರಂಗ ಕ್ಷೇತ್ರ ಪಾವನ ವಿಟ್ಠಲ ಪುಂಡರೀಕಾಕ್ಷ ಶ್ರೀಪುರಂದರವಿಟ್ಠಲಗೆ ll 3 ll ರಾಗ - : ತಾಳ - ದೇವಕಿನಂದನ ಮುಕುಂದ ll ಪ ll ನಿಗಮೋದ್ಧಾರ - ನವನೀತ ಚೋರ l ಖಗಪತಿವಾಹನ ಜಗದೋದ್ಧಾರ ll 1 ll ಶಂಖ - ಚಕ್ರಧರ - ಶ್ರೀ ಗೋವಿಂದ l ಪಂಕಜಲೋಚನ ಪರಮಾನಂದ ll 2 ll ಮಕರಕುಂಡಲಧರ - ಮೋಹನವೇಷ l ರುಕುಮಿಣಿವಲ್ಲಭ ಪಾಂಡವಪೋಷ ll 3 ll ಕಂಸಮರ್ದನ - ಕೌಸ್ತುಭಾಭರಣ l ಹಂಸವಾಹನ ಪೂಜಿತ ಚರಣ ll 4 ll ವರವೇಲಾಪುರ ಚೆನ್ನಪ್ರಸನ್ನ l ಪುರಂದರವಿಟ್ಠಲ ಸಕಲಗುಣಪೂರ್ಣ ll 5 ll ರಾಗ - : ತಾಳ -  ಮಂಗಳಂ ಜಯಮಂಗಳಂ ll ಪ ll ವಾತಸುತ ಹನುಮನ ಒಡೆಯಗೆ ಮಂಗಳ  ದಾತ ಶ್ರೀ ರಘುಪತಿಗೆ ಮಂಗಳ ll ಸೇತುವೆಗಟ್ಟಿದ ರಾಯಗೆ ಮಂಗಳ ಸೀತಾರಮಣಗೆ ಶುಭ ಮಂಗಳ ll 1 ll ಬಿಲ್ಲ ಹಿಡಿದು ಬಲು ಬಿಂಕದ ದೈತ್ಯರ ಹಲ್ಲು ಮುರಿದವಗೆ ಮಂಗಳ ll ಕಲ್ಲಾದಹಲ್ಯೆಯನುದ್ಧಾರ ಮಾಡಿದ ಬಲ್ಲಿದ ದಾಶರಥಿಗೆ ಮಂಗಳ ll 2 ll ಹರಧನು ಮುರಿದ ವಿನೋದಿಗೆ ಮಂಗಳ ವರದ ತಿಮ್ಮಪ್ಪಗೆ ಮಂಗಳ ll ಪುರಂದರವಿಟ್ಠಲರಾಯಗೆ ಮಂಗಳ ಸರುವೋತ್ತಮನಿಗೆ ಶುಭಮಂಗಳ ರಾಗ - : ತಾಳ - ಆರತಿಯ ಬೆಳಗಿರೆ ll ಪ ll ಅರಸಿ ರುಕ್ಮಿಣಿ ಕೂಡ ಅರಸು ವಿಟ್ಠಲಗೆ ಬಿರುದಿನ ಶಂಖವ ಪಿಡಿದ ವಿಟ್ಠಲಗೆ ll ಸರಸಿಜಸಂಭವ ಸನ್ನುತ ವಿಟ್ಠಲಗೆ ನಿರುತ ಇಟ್ಟಿಗೆ ಮೇಲೆ ನಿಂತ ವಿಟ್ಠಲಗೆ ll 1 ll ದಶರಥರಾಯನ ಉದರದಿ ವಿಟ್ಠಲ ಶಿಶುವಾಗಿ ಜನಿಸಿದ ಶ್ರೀರಾಮ ವಿಟ್ಠಲ ll ಪಶುಪತಿ ಗೋಪಿಯ ಕಂದನೆ ವಿಟ್ಠಲ ಅಸುರೆ ಪೂತನಿಯ ಕೊಂದ ವಿಟ್ಠಲಗೆ ll 2 ll ಕಂಡಿರ ಬೊಬ್ಬುರ ವೆಂಕಟವಿಟ್ಠಲನ ಅಂಡಜವಾಹನ ಅಹುದೋ ನೀ ವಿಟ್ಠಲ ll ಪಾಂಡುರಂಗ ಕ್ಷೇತ್ರ ಪಾವನ ವಿಟ್ಠಲ ಪುಂಡರೀಕಾಕ್ಷ ಶ್ರೀಪುರಂದರವಿಟ್ಠಲಗೆ ll 3 ll . ರಾಗ - : ತಾಳ - ಇನ್ನೇಕೆ ಯಮನ ಬಾಧೆಗಳು ? l ಎನ್ನ ಜಿಹ್ವೆಯೊಳಗೆ ಹರಿನಾಮವಿರಲು ll ಪ ll ಪತಿತ ಪಾವನನೆಂಬ ನಾಮ-ಸಕಲ l ಶ್ರುತಿತತಿಗಳಿಗೆಲ್ಲ ನಿಲುಕದೀ ನಾಮ ll ಕ್ರುತುಕೋಟಿ ಫಲ ಒಂದೇ ನಾಮ-ಸದ್ l ಗತಿಗೆ ಸಂಗಡ ಬಾಹೋದಲೆ ದಿವ್ಯನಾಮ ll 1 ll ಮುನ್ನ ಪ್ರಹ್ಲಾದನೆ ಸಾಕ್ಷಿ - ನಮ್ಮ l ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ll ಚೆನ್ನ ಅಜಮಿಳನೊಬ್ಬ ಸಾಕ್ಷಿ ಆ l ಉನ್ನಂತ ಲೋಕವಾಳುವ ಧ್ರುವ ಸಾಕ್ಷಿ ll 2 ll ಹದಿನಾಲ್ಕು ಲೋಕವಾಳುವ - ನಮ್ಮ l ಮದನ ಜನಕನಾಗಿ ಮಹಿಮೆ ತೋರುವ ll ಪದುಮನಾಭನಾಗಿ ಮೆರೆವ - ನಮ್ಮ l ಪುರಂದರವಿಟ್ಠಲನ ಹರುಷದಿ ಕರೆವ ll 3  ರಾಗ - : ತಾಳ -  ನಂಬಿದೆ ನಿನ್ನ ಪಾದವ, ವೆಂಕಟರಮಣ ನಂಬಿದೆ ನಿನ್ನ ಪಾದವ ll ಪ ll ನಂಬಿದೆ ನಿನ್ನ ಪಾದಾಂಬುಜಯುಗಳವ ಚಂದದಿ ಸಲಹೋ ಮಂದರಧರನೆ ll ಅ ಪ ll ತಂದೆಯು ನೀನೇ ತಾಯಿಯು ನೀನೇ ಬಂಧುಬಳಗವು ನೀನೆ ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ ಬಂದೆನ್ನ ಸಲಹೋ ಮುಕುಂದಮುರಾರಿ ll 1 ll ಚಿಕ್ಕಂದು ಮೊದಲು ನಾನು ನಿನ್ನಯ ಪಾದ ಹೊಕ್ಕು ಜೀವಿಸುತಿಹೆನು ಘಕ್ಕನೆ ಜ್ಞಾನವ ಅಕ್ಕರದಿಂದಲೆ ಕೊಡು ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ ll 2 ll ಮರೆತು ಮಾಯದೊಳು ಮುಳುಗಿದೆ ಮಾಯ- ವರಿತು ಅರಿಯದಾದೆ ಮರೆಯದೆ ಎನ್ನನು ಸಲಹೊ ಕೃಪಾನಿಧಿ ವರದ ಶ್ರೀವೆಂಕಟ ಪುರಂದರವಿಠಲ ll 3 ll ರಾಗ - : ತಾಳ - ಏನ ಪೇಳಲಿ ನಾನು ಕೃಷ್ಣನ  ಮಹಿಮೆ, ಯಾರಿಗೂ ತಿಳಿಯದಮ್ಮ ll ಪ ll ಹೊತ್ತಾರೆದ್ದು ಯಶೋದೆ ಮುತ್ತು ಪೋಣಿಸುತ್ತಿದ್ದಳು,  ಹತ್ತಿರಿದ್ದ ಕೃಷ್ಣ ಬಂದು ಒಂದು ಮುತ್ತು ತೆಗೆದುಕೊಂಡು  ಸುತ್ತಲಿದ್ದ ಹುಡುಗರ ಸಹಿತ ಹಿತ್ತಲೊಳಗೆ ಬಿತ್ತಿ ಹೋದ ll ಅ ಪ ll ಪರಿಪರಿ ಚಿಂತೆಯಿಂದ ಯಶೋದೆ ಗೋಪ್ಯರ ಕಳುಹಿದಳು,  ಸಂದು ಸಂದಲ್ಲಿ ಹುಡುಕಿ ಹುಡುಕಿ ಕಂದ ಕಾಣನೆಂದು ಬರಲು,  ಒಂದು ಕ್ಷಣದಲ್ಲಿ ಕೃಷ್ಣ ಬಂದು ಎದುರಾಗಿ ನಿಂದ ಕಂದ ll 1 ll ಕಂದಯ್ಯನ ಕರವ ಪಿಡಿದು, ಯಶೋದೆ ಕರೆ ತಂದಳು ಮನೆಗೆ,  ಕಂದ ಬಹಳ ಹಸಿದನೆಂದು ತುತ್ತು ಮಾಡಿ ಉಣಿಸಿದಳು,  ಕಂದ ಮುತ್ತು ತೋರಿಸು ಚಂದಿರ ನೀನೆಂದು ಮುದ್ದಿಸಿದಳು ll 2 ll ತಾಯ ಕರೆದು ಹಿತ್ತಲೊಳಗೆ ಮುತ್ತಿನ ಗಿಡವ ತೋರಿಸಿದ  ಪಂಟೆ ಪಂಟೆಗೆ ಎಂಟು ಎಂಟು ಗೊಂಚು ಗೊಂಚು ಜೋಲುತಿರಲು,  ಕಡಿದು ಕಡಿದು ರಾಶಿ ಹಾಕಿದ ಪರಮ ಪುರಂದರ ವಿಠಲರಾಯ ll 3 ll ರಾಗ - : ತಾಳ - ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಎನು ಮನವೆ ll ಪ ll ನಾರಾಯಣನೆಂಬೊ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ll ಅ ಪ ll ತರಳ ಧ್ರುವನಿಂದ ಅಂಕುರಿಸಿತು ಅದು ವರ ಪ್ರಹ್ಲಾದನಿಂದ ಮೊಳಕೆಯಾಯಿತು ಧರಣೀಶ ರುಕುಮಾಂಗದನಿಂದ ಚಿಗುರಿತು ಕುರು ಪಿತಾಮಹನಿಂದ ಹೂವಾಯಿತು ll 1 ll ವಿಜಯನ ಸತಿಯಿಂದ ಫಲವಾಯಿತು ಅದು ಗಜರಾಜನಿಂದ ದೋರೆ ಹಣ್ಣಾಯಿತು ದ್ವಿಜ ಶುಕಮುನಿಯಿಂದ ಫಲಪಕ್ವವಾಯಿತು ಅಜಮಿಳ ತಾನುಂಡು ರಸ ಸವಿದ ll 2 ll ಹೂವುಗಳು ಸರ ಎಂದು ಧರಿಸುವಿರಾ? ಎಚ್ಚರಿಕೆ! Would you wear a garland of flowers? Warning! ಹೂವುಗಳು ಸರ ಎಂದು ಧರಿಸುವಿರಾ? ಎಚ್ಚರಿಕೆ! #bones #skull #skulls #skeleton #art #oddities #taxidermy #emilydeschan ಕಾಮಿತ ಫಲವೀವ ನಾಮವೊಂದಿರಲಿಕ್ಕೆ ಹೋಮ ನೇಮ ಜಪ ತಪವೇಕೆ ಸ್ವಾಮಿ ಶ್ರೀ ಪುರಂದರವಿಟ್ಠಲನ ನಾಮವ ನೇಮದಿಂದ ನೀ ನೆನೆ ಮನವೆ ll 3 ll ರಾಗ - : ತಾಳ - ವೇಣುನಾದ ಬಾರೊ, ವೆಂಕಟರಮಣನೆ ಬಾರೊ l ಬಾಣನ ಭಂಜಿಸಿದಂಥ ಭಾವಜನಯ್ಯನೆ ಬಾರೊ ll ಪ ll ಪೂತನಿಯ ಮೊಲೆಯುಂಡ ನವ- l ನೀತ ಚೋರನೆ ಬಾರೊ ll ದೈತ್ಯರಾವಣನ ಸಂಹರಿಸಿದ l ಸೀತಾನಾಯಕ ಬಾರೊ ll 1 ll ಹಲ್ಲು ಮುರಿದು ಮಲ್ಲರ ಗೆದ್ದ l ಫುಲ್ಲನಾಭನೆ ಬಾರೊ ll ಗೊಲ್ಲತಿಯರೊಡನೆ ನಲಿವ l ಚೆಲ್ವ ಮೂರುತಿ ಬಾರೊ ll 2 ll ಮಂದಾರವನೆತ್ತಿದಂಥ l ಇಂದಿರಾ ರಮಣನೆ ಬಾರೊ ll ಕುಂದದೆ ಗೋವುಗಳ ಕಾಯ್ದ l ನಂದನಂದನನೆ ಬಾರೊ ll 3 ll ನಾರಿಯರ ಮನೆಗೆ ಪೋಪ l ವಾರಿಜಾಕ್ಷನೆ ಬಾರೊ ll ಈರೇಳು ಭುವನವ ಕಾಯ್ವ l ಮಾರನಯ್ಯನೆ ಬಾರೊ ll 4 ll ಶೇಷಶಯನ ಮೂರುತಿಯಾದ l ವಾಸುದೇವನೆ ಬಾರೊ ll ದಾಸರೊಳು ವಾಸವಾದ l ಶ್ರೀಶ ಪುರಂದರವಿಟ್ಠಲ ಬಾರೊ ll 5 ll ರಾಗ - : ತಾಳ - ರಾಮ ರಾಮ ರಾಮ ಎನ್ನಿರೋ ಇಂಥ ಸ್ವಾಮಿಯ ನಾಮವ ಮರೆಯದಿರೋ || ಪ. || ತುಂಬಿದ ಪಟ್ಟಣಕೆ ಒಂಭತ್ತು ಭಾಗಿಲು ಸಂಭ್ರಮದರಸರು ಐದು ಮಂದಿ ಡಂಭಕತನದಿಂದ ತಿರುಗುವ ಕಾಯವ ನಂಬಿ ನೆಚ್ಚಿ ನೀವು ಕೆಡಬೇಡಿರೊ || ೧ || ನೆಲೆ ಇಲ್ಲದೀ ಕಾಯ ಎಲುವಿನ ಪಂಜರ ಬಲಿದು ಸುತ್ತಿದ ಚರ್ಮದ ಹೊದಿಕೆ ಮಲ ಮೂತ್ರಂಗಳು ಕೀವು ಕ್ರಿಮಿಗಳುಳ್ಳ ಭರಿತ ದೇಹವ ನೆಚ್ಚಿ ಕೆಡಬೇಡಿರೊ || ೨ || ಹರ ಬ್ರಹ್ಮ ಸುರರಿಗೆ ವಂದಿತ ಆಗಿಪ್ಪ ಹರಿ ಸರ್ವೋತ್ತಮ ಒಬ್ಬನೇ ಕಾಣಿರೋ ಪುರಂದರವಿಠಲನ ಚರಣವ ಭಜಿಸಿರೊ ದುರಿತ ಭಯಗಳಿಂದ ದೂರಾಗಿರೊ || ೩ || *ತಂದೆಯಾಗಿ ತಾಯಿಯಾಗಿ ಇಂದಿರೇಶನೆ ಎನಗೆ* *ಬಂಧುವಾಗಿ ಬಳಗವಾಗಿ ಸಿಂಧುಶಯನನೆ ಎನಗೆ* *ಹಿಂದಾಗಿ ಮುಂದಾಗಿ ಮುಕುಂದನೆ ಎನಗೆ* *ಸ್ವಾಮಿಯಾಗಿ ಪ್ರೇಮಿಯಾಗಿ ರಾಮಚಂದ್ರನೆ ಎನಗೆ* *ಗುರುವಾಗಿ ದೈವವಾಗಿ ದೇವೋತ್ತಮನೆ ಎನಗೆ* *ವಿದ್ಯೆಯಾಗಿ ಬುದ್ಧಿಯಾಗಿ ವಿದ್ಯಾಪತಿಯೆ ಎನಗೆ* *ದಿಕ್ಕಾಗಿ ದೆಸೆಯಾಗಿ ರಕ್ಕಸಾಂತಕ ಎನಗೆ* *ಇಹವಾಗಿ ಪರವಾಗಿ ಶ್ರೀಕೃಷ್ಣ ನಮ್ಮ ಪೊರೆವ ll - ಶ್ರೀವ್ಯಾಸರಾಜರು* ಶ್ರೀಪುರಂದರದಾಸರು ಮಾರ್ಮಿಕವಾಗಿ ಭಗವಂತನೇ ಸರ್ವಸ್ವ ಎಂದದ್ದು ಹೀಗಿದೆ. ನೀನಿಲ್ಲದ ಜನವಿಲ್ಲ, ನೀನಿಲ್ಲದ ಗತಿಯಿಲ್ಲ. *ನಿನ್ನಂಥ ತಂದೆ ಎನಗುಂಟು ನಿನಗಿಲ್ಲ* *ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ* *ನಿನ್ನಂಥ ದೊರೆಯೊಬ್ಬ ಎನಗುಂಟು ನಿನಗಿಲ್ಲ* *ನೀನೆ ಪರದೇಶಿ ನಾನೆ ಸ್ವದೇಶಿ* *ನಿನ್ನ ಅರಸಿ ಲಕ್ಷ್ಮಿ ಎನಗೆ ತಾಯಿಯುಂಟು* *ಎನಗಿದ್ದ ತಾಯಿ ತಂದೆ ನಿನಗ್ಯಾರು* *ತೋರೋ ಪುರಂದರವಿಟ್ಠಲ ll - ಶ್ರೀಪುರಂದರದಾಸರು* ನಿತ್ಯವೂ ಎಲ್ಲರೂ ಭಗವಂತನಲ್ಲಿ ನಿವೇದಿಸಿಕೊಳ್ಳುವ ಸ್ತೋತ್ರ - *ತ್ವಮೇವ ಮಾತಾ ಚ ಪಿತಾ ತ್ವಮೇವ l ತ್ವಮೇವ ಬಂಧುಶ್ಚ ಸಖಾ ತ್ವಮೇವ ll* *ತ್ವಮೇವ ವಿದ್ಯಾ ದ್ರವಿಣಂ ತ್ವಮೇವ l ತ್ವಮೇವ ಸರ್ವಂ ಮಮ ದೇವ ದೇವ ll* *ತಾಯಿ ತಂದೆಯೆನ್ನ ಗುರು ದೈವ ನೀನೆ ಕೃಷ್ಣ l* *ಪಾಹಿ ಪಂಚಾಕ್ಷರ ಪರಮ ಪುಣ್ಯ ನೀನೆ ll - ಶ್ರೀಪುರಂದರದಾಸರು* ರಾಗ - : ತಾಳ - ಅರಿಯರು ಮನುಜರು ಅರಿತವರರಿಯರೊ l ಧರಿಗೆ ವಡೆಯ ಶ್ರೀ ಹರಿಯಲ್ಲದಿಲ್ಲವೆಂದು ll ಪ ll ನಾರದ ಮುನಿಬಲ್ಲ ವಾರಿಜೋದ್ಭವ ಬಲ್ಲ l ಪರಾಶರನು ಬಲ್ಲ ಮನುಬಲ್ಲನು l ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು l ಧಾರುಣಿಗರಸು ಶ್ರೀ ನಾರಾಯಣನೆಂದು ll 1 ll ಶಿವಬಲ್ಲ ಧ್ರುವಬಲ್ಲ ದ್ರೌಪದಿ ಬಲ್ಲಳು l ಅವನಿಪ ಜನಕರಾಯನು ಬಲ್ಲನು l ಯುವತಿಗೆ ವರವಿತ್ತ ಗೌತಮ ಬಲ್ಲನು l ಭವರೋಗ ವೈದ್ಯ ಶ್ರೀಹರಿಯಲ್ಲದಿಲ್ಲವೆಂದು ll 2 ll ಧಿಟ್ಟ ಪ್ರಹ್ಲಾದಬಲ್ಲ ಕೆಟ್ಟಜಾಮಿಳಬಲ್ಲ l ದೃಷ್ಟಾಂತ ಕಂಡ ಭೃಗು ಮುನಿಬಲ್ಲನು l ಕೊಟ್ಟ ಬಲಿಬಲ್ಲನು ಮೊರೆಯಿಟ್ಟ ಗಜೇಂದ್ರನು ಬಲ್ಲ l ಸೃಷ್ಟಿಗೆ ಪುರಂದರವಿಟ್ಠಲನೆ ದೈವವೆಂದು ll 3 ll [19/05, 05:32] +91 94485 58768: *ಹರಿದಾಸ ಹೃದಯ* *ವೈಶಾಖ ಬಹುಳ ಸಪ್ತಮಿ* *ಇದ್ದು ಜಯಿಸಿ* *ಈಸ ಬೇಕು ಇದ್ದು ಜಯಿಸಬೇಕು l* *ಹೇಸಿಕೆ ಸಂಸಾರದಲಿ ಆಶೆ ಲೇಶ ಇಡದ ಹಾಗೆ ll ಪ ll* ಹುಟ್ಟಿ ಬಂದ ಮನುಷ್ಯನಿಗೆ ಭರವಸೆ ನೀಡುವ, ಸವಾಲನ್ನೂ ಎದುರಿಸುವ, ಆತ್ಮವಿಶ್ವಾಸವನ್ನು ತುಂಬುವ ಬಹ್ವರ್ಥಗರ್ಭಿತವಾದ ಮಾತು ಇದಾಗಿದೆ. ಜೀವನದಲ್ಲಿ ಪ್ರತಿಯೊಬ್ಬರೂ ಎಂದಿಗೂ, ಎಂತಹ ಪರಿಸ್ಥಿತಿಯಲ್ಲೂ ಬದುಕಿಗೆ ಬೆನ್ನು ತೋರದೆ ಸುಖಬಾಳನ್ನು ಸಾಗಿಸಲು ದಾಸರು ಮುತ್ತಿನಂಥಹ ಮಾತನ್ನು ಆಡಿರುವರು. *ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು* *ಸ್ವಾಮಿ ರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ ll 1 ll* ಈ ಸಂಸಾರದಲ್ಲಿ *'ಇರಬೇಕು-ಇರದಿರಬೇಕು'* ಎಂದಂತೆ, ನೀರಲ್ಲೇ ಇರುವ ತಾವರೆ ಎಲೆ ಆ ನೀರನ್ನು ಅಂಟಿಸಿಕೊಳ್ಳದೆ ಇದ್ದಂತೆ ಮನುಷ್ಯ ಜೀವನ ಸಾಗಿಸಬೇಕು. ಈ ನಿರ್ಲಿಪ್ತತೆಯೊಂದಿಗೆ ಭಗವಂತನ ಲಿಪ್ತತೆ ಇರಬೇಕು ಎನ್ನುವರು. ಇದು ಸುಖಜೀವನದ ಗುಟ್ಟು ಎನ್ನುವರು. *ಗೇರು ಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ* *ಮೀರಿ ಆಶೆ ಮಾಡದ ಹಾಗೆ ಧೀರಕೃಷ್ಣನ ನೆನೆಯುವರೆಲ್ಲ ll 2 ll* ಸಂಸಾರವನ್ನು ತೊರೆದು ಹೊರಬರಲಾಗದು. ಇರಬೇಕು, ಅಂಟಿಕೊಂಡಿರಬಾರದು. ಇದೊಂದು ಯೋಗ (ಕರ್ಮದಲ್ಲಿ ಕುಶಲತೆ). ಆದರೆ ಭಗವಂತನೊಂದಿಗೆ ಅಂಟಿರಬೇಕು. ನಿಜಾರ್ಥದಲ್ಲಿ ಇದು ಸಂಸಾರ ಜಯ. ಎಂದಿಗೂ ಯೋಗ್ಯತೆಗೆ ಮೀರಿದ ಆಶೆ - ಕಾಮನೆ ನಿಷಿದ್ಧ. ಹೇಗೆ ಗೇರುಬೀಜ ಅಂಟಿಕೊಳ್ಳದೆ ಅದರಲ್ಲೇ ಇದ್ದಂತೆ ಎಂದರು.   *ಮಾಂಸದಾಸೆಗೆ ಮತ್ಸ್ಯವು ಸಿಲುಕಿ ಹಿಂಸೆಪಟ್ಟ ಪರಿಯೊಳು* *ಮೋಸ ಹೋಗದೆ ಪುರಂದರವಿಟ್ಠಲ ಜಗದೀಶನೆನುತ ಕೊಂಡಾಡುವರೆಲ್ಲ ll 3 ll* ಸಂಸಾರ ಕಾಮನೆಗಳ ಗೂಡು. ಅದರಲ್ಲೂ ಚಾಪಲ್ಯವೆಂಬುದು ಬಿಡಲಾಗದ ರೋಗ. ಉದಾಹರಣೆಗೆ ಮೀನು. ಜಿಹ್ವಾ ಚಾಪಲ್ಯದಿಂದ ಸಾಯುತ್ತೆ. ಧನ - ಹೆಣ್ಣು - ಮಣ್ಣುಗಳಿಗಾಗಿ ಹೊಡೆದಾಡಿ, ಸೆಣಸಾಡಿ ಬಾಳುವುದೇ ಹೇಸಿಗೆ ಸಂಸಾರ. ಇವುಗಳಿಂದ ದೂರವಿದ್ದು ಬದುಕುವುದೇ ಸಂಸಾರದಲ್ಲಿ ಈಜಾಡಿ ಜಯಗಳಿಸುವುದು. ಈ ರಹಸ್ಯವನ್ನು ದಾಸರು ಉಪಮಾನಗಳಿಂದ ಬಣ್ಣಿಸಿರುವರು. ಶ್ರೀಪುರಂದರರು ಸಾಧನ ಜೀವಿಗೆ ನೀಡಿದ, ಆತ್ಮವಿಶ್ವಾಸವನ್ನೂ ತುಂಬಿದ ಮಾತುಗಳಾಗಿವೆ. ಈ ಸಂಸಾರಕ್ಕೆ ಅಂಟಿಕೊಳ್ಳದೆ, ಆಶೆ ಲೇಶ ಇರದ ಹಾಗೆ ಇದ್ದು ಜಯಿಸಿರೆಂದರು. ಸಂಸಾರಕ್ಕೆ ಅಂಜಿ ಎಂದಿಗೂ ಹೇಡಿಯಂತೆ ಬೆನ್ನು ಮುಖ ಮಾಡದೆ, ಮರ್ಮವನ್ನು ಅರಿತು, ಭಗವಂತನ ಮೇಲೆ ಭಾರಹಾಕಿ ಇದ್ದು ಜಯಿಸಿರೆಂದು ಅಭಯವಿತ್ತರು. ಆತ್ಮವಿಶ್ವಾಸ ತುಂಬಿದರು. #Chetha #Muniswamy #gowda #Riya #YOGI #ChethanaMuniswamygowda   *ಚರಣ ಸೇವಕನಲ್ಲಿ ಕರುಣ ಬಾರದ್ಯಾಕೆ ? - ಶ್ರೀನ.* *ಅನ್ನದಾನಕ್ಕೆ ಮಿಗಿಲಿಲ್ಲ* *'ಅತ್ತೃತ್ವಾತ್ ಸರ್ವಲೋಕಾನಂ ಅನ್ಯಮಿತ್ಯುಚ್ಯತೇ ಹರಿಃ' l* ಎಲ್ಲ ಕಾಲಕ್ಕೂ ಎಲ್ಲರಿಗೂ ತರ್ಪಕ, ತೃಪ್ತಿ ನೀಡುವವನು, ಅಣ್ಣದಲ್ಲಿ ಸನ್ನಿಹಿತನಾಗಿ ಆ ಹೆಸರಿನವನಾದ ಭಗವಂತ.  ಜಗತ್ತಿನಲ್ಲಿ ಎಲ್ಲರೂ ಎಲ್ಲ ಪ್ರಾಣಿಗಳೂ ಅನ್ನಕ್ಕೆ ಅರ್ಹರೇ. ಅನ್ನ - ನೀರನ್ನು ಯಾರಿಗೂ ಇಲ್ಲ ಎಂದೆನಬಾರದೆಂದು ಶಾಸ್ತ್ರವಿಧಿಯಿದೆ. ಶ್ರೀಪುರಂದರರ ಮಾತು ಹೀಗಿದೆ. *ಚೋರನಾದರು ಚಾಂಡಾಲನಾದರು ಬ್ರಹ್ಮಘ್ನ ಪಿತೃ ಘಾತಕಿಯಾದರು* *ಆವನಾದರು ಮಧ್ಯಾನ್ಹ ಕಾಲಕ್ಕೆ ಅತಿಥಿಯಾಗಿ ಮನೆಗೆ ಬಂದರೆ* *ತುತಿಸಿ ಅನ್ನವನಿಟ್ಟು ಸ್ವಾಮಿ ಪುರಂದರವಿಟ್ಠಲಗರ್ಪಿಸಬೇಕು ll - ಶ್ರೀಪುರಂದರದಾಸರು* ಶ್ರೀವಿಜಯದಾಸರೂ ತಮ್ಮ ಒಂದು ಸುಳಾದಿಯಲ್ಲಿ ಅನ್ನದ ಬಗ್ಗೆ ಹೇಳುವಾಗ - *ಅನ್ನ ಇತ್ತರೆ ಅದು ಭವನವಾಗಿ ತೋರುವದು* *ಅನ್ನ ನೀಯದಿರೆ ಅದು ಕಾನನಕೆ ಸರಿ ಎನ್ನಿ* *ಅನ್ನದಿಂದಲಿ ಬಂದ ಘನದುರಿತಹರ ಕಾಣೋ* *ಅನ್ನದಿಂದಲಿ ಸರ್ವಪೂರ್ಣ ಫಲಿಸುವದು* *ಅನ್ನ ಇತ್ತವನ ಕೀರ್ತಿ ಉನ್ನತವಾಗಿ, ತ್ರಿಭು* *ವನದೊಳಗೆ ತುಂಬಿ ಚೆನ್ನಾಗಿ ಪೊಳೆಪದಯ್ಯ* *ಅನ್ನದಾನಕ್ಕಿಂತ ಇನ್ನು ಮಿಗಿಲು ದಾನಗಳಿಲ್ಲ* *ಹೊನ್ನು ಹಣ ಕೊಡಲು, ಆ ಗಣ್ಯ ಅನ್ನದಾನಕ್ಕೆ* *ಅನಂತಕಾಲ ಮುಖವನ್ನೆ ಮಾಡಲು ವಿಪ್ರ* *ಗುಣಿಸಿದುದಕೆ ಸರಿಯೆನ್ನಬಹುದೆ ತಿಳಿದು* *ಅನಂತ ಮೂರುತಿ ವಿಜಯವಿಟ್ಠಲರೇಯ* *ತನ್ನವನಿವನೆಂದು ಮನ್ನಿಸಿ ಸಲಹುವ ll - ಶ್ರೀವಿಜಯದಾಸರು* ಶ್ರೀ ಪುರಂದರರು ಅನ್ನದಾನವೆ ಮಿಗಿಲೆನ್ನಲು ಒಂದು ಉಗಾಭೋಗದಲ್ಲಿ ಹೀಗೆಂದರು, *ಅನ್ನಪಾನಾದಿಗಳೀಯೋ ಅಭ್ಯಾಗತ ಬ್ರಾಹ್ಮಣರಿಗೆ* *ಅನ್ನಪಾನಾದಿಗಳೀಯೋ ಆ ಚಾಂಡಾಲಸಪ್ತರಿಗೆ* *ಅನ್ನಪಾನಾದಿಗಳೀಯೋ ಅಂಧದೀನ ಕೃಪಣರಿಗೆ* *ಹಸಿವೆಗೆ ಹಾಗವನ್ನರ್ಪಿಸೋ ಪುರಂದರವಿಟ್ಠಲಗೆ ll - ಶ್ರೀಪುರಂದರದಾಸರು* ರಾಗ - : ತಾಳ - ರಾಮ ರಾಮ ರಾಮ ರಾಮ ರಾಮಯೆನ್ನಿರೋ l ರಾಮ ರಾಮಯೆಂಬ ನಾಮ ಮನದಿ ನೆನೆಯಿರೊ ll ಪ ll ಇಂದ್ರಿಯಂಗಳೆಲ್ಲ ಕೂಡಿ ಬಂದು ತನ್ನ ಮುಸುಕಿದಾಗ l ಸಿಂಧುಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು ll 1 ll ಭರದಿ ಯಮನ ಭಟರು ಬಂದು ಹೊರಡು ಎಂದು ಮುಟ್ಟಲು l ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ ll 2 ll ಕಾಸಶ್ವಾಸದಲ್ಲಿ ಸಿಲುಕಿ ದೋಷ ಬಲಿದು ಪೋಗುವಾಗ l ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ ll 3 ll ಶೃಂಗಾರವಾದ ದೇಹ ತಂಗಿಬಿಟ್ಟು ಪೋಗುವಾಗ l ಕಂಗಳಿಗಾತ್ಮ ಸೇರಿದಾಗ ರಂಗನ ಧ್ಯಾನ ದೊರಕದಯ್ಯ ll 4 ll ಕಷ್ಟಜನ್ಮದಲ್ಲಿ ಬಂದು ದುಷ್ಟಕರ್ಮಗಳನು ಮಾಡಿ l ಬಿಟ್ಟು ಹೋಗುವಾಗ ಪುರಂದರವಿಟ್ಠಲನ ನೆನೆಮನವೆ ll 5 ll https://youtu.be/lFtvDcLpsC8?feature=shared ರಾಗ - : ತಾಳ -  ನಂಬಿ ಕೆಟ್ಟವರುಂಟೆ - ಕೃಷ್ಣಯ್ಯನ l ನಂಬಲಾರದೆ ಕೆಟ್ಟರು ll ಪ ll ಅಂಬುಜನಾಭನ ಪಾದವ ನೆನೆದರೆ l ಇಂಬುಗೊಡದ ದುಃಖ ಹರಿಸುವ ಶ್ರೀಕೃಷ್ಣ ll ಅ ಪ ll ಬಲಿಯಪಾತಾಳಕಿಳುಹಿ - ಭಕ್ತನ ಬಾ - l ಗಿಲವ ಕಾಯುವೆ ನಾನೆಂದ ll ಛಲದೊಳು ಅಸುರರ ಶಿರಗಳ ತರಿದು ತಾ l ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಈ ಕೃಷ್ಣ ll 1 ll ತರಳ ಪ್ರಹ್ಲಾದಗೊಲಿದು - ಹಿರಣ್ಯಕನ ಉ - l ಗುರಿನಿಂದಲೆ ಸೀಳಿದ ll ಕರಿರಾಜಗೊಲಿದು ನೆಗಳು ನುಂಗುತಿರಲಾಗ l ಪರಿಹರಿಸಿದ ಜಲದೊಳು ಪೊಕ್ಕು ಶ್ರೀಕೃಷ್ಣ ll 2 ll ಪಾಂಡವರಿಗೆ ಒಲಿದು - ಕೌರವರನು l ತುಂಡು ಛಿದ್ರಮಾಡಿದೆ ll ಗಂಡರೈವರ ಮುಂದೆ ದ್ರೌಪದಿ ಕೂಗಲು l ಕಂಡು ಕರುಣದಿ ಕಾಯ್ದ ಪುರಂದರವಿಟ್ಠಲನ ll 3 ll https://youtube.com/shorts/EAxMa5OAMJc?si=0gcI2nGVmQOimNrA

More news from Karnataka and nearby areas
  • 🚨🚨🚨
    1
    🚨🚨🚨
    user_Kalyan karanataka news channel
    Kalyan karanataka news channel
    Journalist Kalaburagi, Karnataka•
    13 hrs ago
  • ಎಚ್ ಟಿ ಎಂ ಆಯುರ್ವೇದ ಬೆಂಗಳೂರು ಹಕೀಮ್ ನೌಶಾದ್ ಖಾನ್ ಸಿಂಪಲ್ ಹೋಮ್ ರೆಮಿಡಿ ಆಲ್ ಪ್ರಾಬ್ಲಮ್ಸ್
    1
    ಎಚ್ ಟಿ ಎಂ ಆಯುರ್ವೇದ ಬೆಂಗಳೂರು 
ಹಕೀಮ್ ನೌಶಾದ್ ಖಾನ್ ಸಿಂಪಲ್ ಹೋಮ್ ರೆಮಿಡಿ ಆಲ್ ಪ್ರಾಬ್ಲಮ್ಸ್
    user_Naushad khan Vahab khan
    Naushad khan Vahab khan
    Ayurvedic clinic Bengaluru South, Bengaluru Urban•
    5 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    7 hrs ago
  • ಮಳವಳ್ಳಿಯಲ್ಲಿ ಡಿಸೆಂಬರ್ 15 ರಿಂದ ನಡೆಯುವ ಸುತ್ತೂರು ಜಯಂತಿ ಮಹೋತ್ಸವದ ಯಶಸ್ವಿಗೆ ಕೈಜೋಡಿಸಲು ಮಾಜಿ ಶಾಸಕರಾದ ಡಾ ಕೆ ಅನ್ನದಾನಿ ಕರೆ ಮಳವಳ್ಳಿ: ಪಟ್ಟಣದಲ್ಲಿ ನಡೆಯುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವದ ಯಶಸ್ವಿಗೆ ಎಲ್ಲರೂ ಸಕ್ರೀಯವಾಗಿ ಭಾಗಿಯಾಗಬೇಕು ಎಂದು ಮಾಜಿ ಶಾಸಕ ಕೆ.ಅನ್ನದಾನಿ ಕರೆ ನೀಡಿದರು. ಪಟ್ಟಣದ ಸುತ್ತೂರು ಜಯಂತ್ಯುತ್ಸವ ಆಚರಣಾ ಸಮಿತಿಯ ಕಾರ್ಯಾಲಯದಲ್ಲಿ ಶನಿವಾರ ಅವರು ಮಾತನಾಡಿ, ಇಂಥ ಐತಿಹಾಸಿಕ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜನರು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಪಾಲ್ಗೊಂಡು ಯಶಸ್ವಿಗೆ ಶ್ರಮಿಸಬೇಕು. ರಾಷ್ಟ್ರದ ಪ್ರಥಮ ಪ್ರಜೆಯನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುತ್ತೂರು ಮಠವು ಸಾಕಷ್ಟು ಶ್ರಮ ವಹಿಸಿದೆ. ಸುತ್ತೂರು ಮಠದಲ್ಲಿ ಎಲ್ಲ ಧರ್ಮೀಯರು ಹಾಗೂ ಜಾತಿಯರು ವಿದ್ಯಾಭ್ಯಾಸ ಸೇರಿದಂತೆ ಎಲ್ಲೆಡೆ ಇದ್ದಾರೆ. ಹಿರಿಯರಾದ ಶಿವಯೋಗಿಗಳು ಆರಂಭಿಸಿದ ಮಠದ ಸಾಮಾಜಿಕ ಜವಾಬ್ದಾರಿಗಳನ್ನು ತೋರಿಸುವ ನಿಟ್ಟಿನಲ್ಲಿ ಇಂಥ ಜಯಂತ್ಯುತ್ಸವವನ್ನು ವಾರಗಟ್ಟಲೆ ಆಚರಿಸಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಅದ್ದೂರಿ ಆಚರಣೆಗೆ ಮುಂದಾಗೋಣ ಎಂದು ಕರೆ ನೀಡಿದರು. ಬಸವಣ್ಣ ಅವರ ಹಾದಿಯಲ್ಲಿ ಸಾಗುತ್ತಿರುವ ಸುತ್ತೂರು ಮಠದ ಸಾರಥ್ಯದಲ್ಲಿ ಏಳು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಷ್ಠಿಗಳು ನಿರಂತರವಾಗಿ ನಡೆಯಲಿವೆ. ಅನೇಕ ವಿಷಯಗಳು ಜನರ ಗಮನ ಸೆಳೆಯಲಿದೆ. ಡಿ.16ರಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಆಗಮನ ಇತಿಹಾಸದ ಪುಟದಲ್ಲಿ ಉಳಿಯಲಿದೆ. ಪ್ರತಿದಿನ ಎಲ್ಲ ಗ್ರಾಮಗಳಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜನರು ಯಾವುದೇ ಆತಂಕವಿಲ್ಲದೇ ಬರಬೇಕು. ಸಂಜೆ 4ಗಂಟೆಗೆ ಆಗಮಿಸಿ ರಾತ್ರಿ 9ಗಂಟೆವರೆಗೆ ಇರಬೇಕು. ಯಾವುದೇ ಲೋಪವಾಗದಂತೆ ಸ್ವಯಂ ಸೇವಕ ತಂಡ ನಿಮ್ಮದೊಂದಿಗೆ ಕಾರ್ಯನಿರ್ವಹಿಸಲಿದೆ. ಕಾರ್ಯಕ್ರಮದಲ್ಲಿ ಉಚಿತ ದಾಸೋಹ ಇರಲಿದೆ ಎಂದರು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರೊಂದಿಗೆ ಸೇರಿದಂತೆ ಗ್ರಾಮೀಣ ಭಾಗಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಂದು ಎಚ್‌.ಡಿ.ಕುಮಾರಸ್ವಾಮಿ ಅವರ ಜನ್ಮದಿನ ಸಹ ಇರುವುದರಿಂದ ಪಕ್ಷದ ಕಾರ್ಯಕರ್ತರು ಸಹ ಆಗಮಿಸಿ ಅವರಿಗೆ ಶುಭ ಕೋರುವ ಕೆಲಸ ಮಾಡಬೇಕು ಮಾಡಬೇಕು ಎಂದು ಹೇಳಿದರು. ಜೆಡಿಎಸ್‌ ತಾಲ್ಲೂಕು ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಮುಖಂಡರಾದ ಸೋಮಣ್ಣ, ಪುಟ್ಟಬುದ್ದಿ, ರಾಜೇಶ್‌, ಕುಮಾರ್‌, ಮಹದೇವಣ್ಣ, ಗಣೇಶ ಪಾಲ್ಗೊಂಡಿದ್ದರು.
    1
    ಮಳವಳ್ಳಿಯಲ್ಲಿ ಡಿಸೆಂಬರ್ 15 ರಿಂದ ನಡೆಯುವ ಸುತ್ತೂರು ಜಯಂತಿ ಮಹೋತ್ಸವದ ಯಶಸ್ವಿಗೆ ಕೈಜೋಡಿಸಲು ಮಾಜಿ ಶಾಸಕರಾದ ಡಾ ಕೆ ಅನ್ನದಾನಿ ಕರೆ
ಮಳವಳ್ಳಿ: ಪಟ್ಟಣದಲ್ಲಿ ನಡೆಯುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವದ ಯಶಸ್ವಿಗೆ ಎಲ್ಲರೂ ಸಕ್ರೀಯವಾಗಿ ಭಾಗಿಯಾಗಬೇಕು ಎಂದು ಮಾಜಿ ಶಾಸಕ ಕೆ.ಅನ್ನದಾನಿ ಕರೆ ನೀಡಿದರು.
ಪಟ್ಟಣದ ಸುತ್ತೂರು ಜಯಂತ್ಯುತ್ಸವ ಆಚರಣಾ ಸಮಿತಿಯ ಕಾರ್ಯಾಲಯದಲ್ಲಿ ಶನಿವಾರ ಅವರು ಮಾತನಾಡಿ, ಇಂಥ ಐತಿಹಾಸಿಕ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜನರು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಪಾಲ್ಗೊಂಡು ಯಶಸ್ವಿಗೆ ಶ್ರಮಿಸಬೇಕು. ರಾಷ್ಟ್ರದ ಪ್ರಥಮ ಪ್ರಜೆಯನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುತ್ತೂರು ಮಠವು ಸಾಕಷ್ಟು ಶ್ರಮ ವಹಿಸಿದೆ. ಸುತ್ತೂರು ಮಠದಲ್ಲಿ ಎಲ್ಲ ಧರ್ಮೀಯರು ಹಾಗೂ ಜಾತಿಯರು ವಿದ್ಯಾಭ್ಯಾಸ ಸೇರಿದಂತೆ ಎಲ್ಲೆಡೆ ಇದ್ದಾರೆ.  ಹಿರಿಯರಾದ ಶಿವಯೋಗಿಗಳು ಆರಂಭಿಸಿದ ಮಠದ ಸಾಮಾಜಿಕ ಜವಾಬ್ದಾರಿಗಳನ್ನು ತೋರಿಸುವ ನಿಟ್ಟಿನಲ್ಲಿ ಇಂಥ ಜಯಂತ್ಯುತ್ಸವವನ್ನು ವಾರಗಟ್ಟಲೆ ಆಚರಿಸಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಅದ್ದೂರಿ ಆಚರಣೆಗೆ ಮುಂದಾಗೋಣ ಎಂದು ಕರೆ ನೀಡಿದರು.
ಬಸವಣ್ಣ ಅವರ ಹಾದಿಯಲ್ಲಿ ಸಾಗುತ್ತಿರುವ ಸುತ್ತೂರು ಮಠದ ಸಾರಥ್ಯದಲ್ಲಿ ಏಳು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಷ್ಠಿಗಳು ನಿರಂತರವಾಗಿ ನಡೆಯಲಿವೆ. ಅನೇಕ ವಿಷಯಗಳು ಜನರ ಗಮನ ಸೆಳೆಯಲಿದೆ. ಡಿ.16ರಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಆಗಮನ ಇತಿಹಾಸದ ಪುಟದಲ್ಲಿ ಉಳಿಯಲಿದೆ. ಪ್ರತಿದಿನ ಎಲ್ಲ ಗ್ರಾಮಗಳಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜನರು ಯಾವುದೇ ಆತಂಕವಿಲ್ಲದೇ ಬರಬೇಕು. ಸಂಜೆ 4ಗಂಟೆಗೆ ಆಗಮಿಸಿ ರಾತ್ರಿ 9ಗಂಟೆವರೆಗೆ ಇರಬೇಕು. ಯಾವುದೇ ಲೋಪವಾಗದಂತೆ ಸ್ವಯಂ ಸೇವಕ ತಂಡ ನಿಮ್ಮದೊಂದಿಗೆ ಕಾರ್ಯನಿರ್ವಹಿಸಲಿದೆ. ಕಾರ್ಯಕ್ರಮದಲ್ಲಿ ಉಚಿತ ದಾಸೋಹ ಇರಲಿದೆ ಎಂದರು.
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರೊಂದಿಗೆ ಸೇರಿದಂತೆ ಗ್ರಾಮೀಣ ಭಾಗಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಂದು ಎಚ್‌.ಡಿ.ಕುಮಾರಸ್ವಾಮಿ ಅವರ ಜನ್ಮದಿನ ಸಹ ಇರುವುದರಿಂದ ಪಕ್ಷದ ಕಾರ್ಯಕರ್ತರು ಸಹ ಆಗಮಿಸಿ ಅವರಿಗೆ ಶುಭ ಕೋರುವ ಕೆಲಸ ಮಾಡಬೇಕು ಮಾಡಬೇಕು ಎಂದು ಹೇಳಿದರು.
ಜೆಡಿಎಸ್‌ ತಾಲ್ಲೂಕು ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಮುಖಂಡರಾದ ಸೋಮಣ್ಣ, ಪುಟ್ಟಬುದ್ದಿ, ರಾಜೇಶ್‌, ಕುಮಾರ್‌, ಮಹದೇವಣ್ಣ, ಗಣೇಶ ಪಾಲ್ಗೊಂಡಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist Malavalli, Mandya•
    1 hr ago
  • Post by Srinivas Ballure
    2
    Post by Srinivas Ballure
    user_Srinivas Ballure
    Srinivas Ballure
    Gornalli B•
    7 hrs ago
  • ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆಯ, ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ದೇವಾನಂದ ನಾಯ್ಡು ಆದೇಶದ ಮೇರೆಗೆ, ಇಡೀ ಭಾರತ ದೇಶದಾಂತೆ ಎಲ್ಲಾ ರಾಜ್ಯಗಳಲ್ಲಿ ಸಂಘಟನೆಯ ಬಲಪಡಿಸುವ ನಿಟ್ಟಿನಲ್ಲಿ, ಸಾರ್ವಜನಿಕರಿಗೂ ಹಾಗೂ ಎಲ್ಲಾ ಜನರಿಗೆ ವಿಶ್ವಾಸಕ್ಕೆ ತೆಗೆದುಕೊಂಡು, ಯಾವುದೇ ಜಾತಿ ಪಂಥ ಭೇದ ಭಾವ ಇಲ್ಲದೆ, ನಾವು ಎಲ್ಲರೂ ಮನುಷ್ಯರೆಂದು ಅರ್ಥೈಸಿಕೊಂಡು, ಮಾನವ ಹಕ್ಕು ಎಲ್ಲಿ ಉಲ್ಲಂಘನೆ ಆಗುತ್ತದೆ, ಅಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಒಬ್ಬರನ್ನೊಬ್ಬರು ಕೈಜೋಡಿಸಿ ಹೋರಾಡೋದಕ್ಕೆ ಶಕ್ತಿ ತುಂಬಬೇಕು, ಮತ್ತು ಭ್ರಷ್ಟಾಚಾರ ಎಲ್ಲಿ ನಡೆಯುತ್ತದೆ, ಅದರ ವಿರುದ್ಧವಾಗಿ ನಾವು ಎಲ್ಲರೂ ಭ್ರಷ್ಟಾಚಾರ ನಿಲ್ಲುವಂತೆ ಮಾಡಬೇಕು, ಎಂದು ರಾಷ್ಟ್ರೀಯ ಅಧ್ಯಕ್ಷರ ಅನಿಸಿಕೆ ಹಾಗೂ ಈ ಸಂಘಟನೆ ಗುರಿಯಾಗಿರುತ್ತದೆ, ಭಾರತ ದೇಶದ ತೆಲಂಗಾಣ ರಾಜ್ಯದಲ್ಲಿ ಹೊಸದಾಗಿ, ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲ ಸಂಘಟನೆಯ ಕಚೇರಿಯನ್ನು, ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ದೇವಾನಂದ ನಾಯ್ಡುಯವರ ಹಸ್ತದಿಂದ ಕಚೇರಿಯನ್ನು ಉದ್ಘಾಟನೆ ಮಾಡಿದರು, ದಿನಾಂಕ 10 ಡಿಸೆಂಬರ್ 2025 ರಂದು, ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ಆರ್ಮರ್‌ನಲ್ಲಿ, ಆರ್‌ಜಿಎನ್ ಮಾನವ ಹಕ್ಕುಗಳ ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆ ನೂತನ ಕಚೇರಿಯನ್ನು ಉದ್ಘಾಟನೆ ಸಂದರ್ಭದಲ್ಲಿ, ಮುಖಂಡ ನರಸಯ್ಯ, ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆಯ ನಿಜಾಮಾಬಾದ ಜಂಟಿ ಕಾರ್ಯದರ್ಶಿ ಶ್ರೀನಿವಾಸ ರಾವ್‌, ನಿಜಾಮಾಬಾದ್‌ ಮಹಿಳಾ ಘಟಕದ ಅಧ್ಯಕ್ಷೆ ಗಂಗಾದೇವಿ, ನಿರ್ಮಲ್‌ ಕುಲಸಚಿವ ಅಶೋಕ್‌ ಕುಮಾರ್‌, ನಿರ್ಮಲ್‌ ಕಾರ್ಯದರ್ಶಿ ಮನೋಹರ್‌, ಜಗಿತ್ಯಾಲ ಹಾಗೂ ಮಹಿಳಾ ಅಧ್ಯಕ್ಷರು, ಸಿರಿಸೆಲ್ಲ ಜಿಲ್ಲಾ ಉಸ್ತುವಾರಿ ಪಂ.ಬಾಲರಾಜು ಜಿಂಕಾ, ಶರತ್‌ ಕುಮಾರ್‌ ಸಂಘಟನೆ ಕಾರ್ಯದರ್ಶಿ, ಅರವಿಂದ ರಾಮಕೃಷ್ಣ, ಕರೀಂನಗರ ಮಹಿಳಾ ಅಧ್ಯಕ್ಷೆ ಕೊತ್ತೇ ಚಂದು, ಜಿಲ್ಲಾ ಅಧ್ಯಕ್ಷೆರಾದ ಅರವಿಂದ ರಾಮಕೃಷ್ಣ, ಕರೀಂನಗರ ಮಹಿಳಾ ಅಧ್ಯಕ್ಷೆ ಡಾ. ಇತರರು ಭಾಗವಹಿಸಿದ್ದರು. ವರದಿ ಸತೀಶ್ ಕುಮಾರ್ ಕಲಾ
    1
    ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನೆ 
ಸಂಘಟನೆಯ,
ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ
ದೇವಾನಂದ ನಾಯ್ಡು ಆದೇಶದ ಮೇರೆಗೆ,
ಇಡೀ ಭಾರತ ದೇಶದಾಂತೆ
ಎಲ್ಲಾ ರಾಜ್ಯಗಳಲ್ಲಿ ಸಂಘಟನೆಯ ಬಲಪಡಿಸುವ ನಿಟ್ಟಿನಲ್ಲಿ,
ಸಾರ್ವಜನಿಕರಿಗೂ ಹಾಗೂ ಎಲ್ಲಾ ಜನರಿಗೆ ವಿಶ್ವಾಸಕ್ಕೆ ತೆಗೆದುಕೊಂಡು, 
ಯಾವುದೇ ಜಾತಿ ಪಂಥ ಭೇದ ಭಾವ ಇಲ್ಲದೆ,
ನಾವು ಎಲ್ಲರೂ ಮನುಷ್ಯರೆಂದು ಅರ್ಥೈಸಿಕೊಂಡು, 
ಮಾನವ ಹಕ್ಕು ಎಲ್ಲಿ ಉಲ್ಲಂಘನೆ ಆಗುತ್ತದೆ,
ಅಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಒಬ್ಬರನ್ನೊಬ್ಬರು ಕೈಜೋಡಿಸಿ ಹೋರಾಡೋದಕ್ಕೆ ಶಕ್ತಿ ತುಂಬಬೇಕು,
ಮತ್ತು ಭ್ರಷ್ಟಾಚಾರ ಎಲ್ಲಿ ನಡೆಯುತ್ತದೆ, ಅದರ ವಿರುದ್ಧವಾಗಿ ನಾವು ಎಲ್ಲರೂ ಭ್ರಷ್ಟಾಚಾರ ನಿಲ್ಲುವಂತೆ ಮಾಡಬೇಕು,
ಎಂದು ರಾಷ್ಟ್ರೀಯ ಅಧ್ಯಕ್ಷರ ಅನಿಸಿಕೆ ಹಾಗೂ ಈ ಸಂಘಟನೆ ಗುರಿಯಾಗಿರುತ್ತದೆ,
ಭಾರತ ದೇಶದ ತೆಲಂಗಾಣ ರಾಜ್ಯದಲ್ಲಿ ಹೊಸದಾಗಿ,
ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲ ಸಂಘಟನೆಯ ಕಚೇರಿಯನ್ನು,
ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ದೇವಾನಂದ ನಾಯ್ಡುಯವರ ಹಸ್ತದಿಂದ  ಕಚೇರಿಯನ್ನು ಉದ್ಘಾಟನೆ ಮಾಡಿದರು,
ದಿನಾಂಕ 10 ಡಿಸೆಂಬರ್ 2025 ರಂದು,
ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ಆರ್ಮರ್‌ನಲ್ಲಿ,
ಆರ್‌ಜಿಎನ್ ಮಾನವ ಹಕ್ಕುಗಳ ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆ  ನೂತನ ಕಚೇರಿಯನ್ನು ಉದ್ಘಾಟನೆ ಸಂದರ್ಭದಲ್ಲಿ,
ಮುಖಂಡ ನರಸಯ್ಯ,
ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆಯ  ನಿಜಾಮಾಬಾದ ಜಂಟಿ ಕಾರ್ಯದರ್ಶಿ ಶ್ರೀನಿವಾಸ ರಾವ್‌,
ನಿಜಾಮಾಬಾದ್‌ ಮಹಿಳಾ ಘಟಕದ ಅಧ್ಯಕ್ಷೆ ಗಂಗಾದೇವಿ, 
ನಿರ್ಮಲ್‌ ಕುಲಸಚಿವ ಅಶೋಕ್‌ ಕುಮಾರ್‌, ನಿರ್ಮಲ್‌ ಕಾರ್ಯದರ್ಶಿ ಮನೋಹರ್‌,
ಜಗಿತ್ಯಾಲ ಹಾಗೂ ಮಹಿಳಾ ಅಧ್ಯಕ್ಷರು,
ಸಿರಿಸೆಲ್ಲ ಜಿಲ್ಲಾ ಉಸ್ತುವಾರಿ ಪಂ.ಬಾಲರಾಜು ಜಿಂಕಾ,
ಶರತ್‌ ಕುಮಾರ್‌ ಸಂಘಟನೆ ಕಾರ್ಯದರ್ಶಿ,
ಅರವಿಂದ ರಾಮಕೃಷ್ಣ,
ಕರೀಂನಗರ ಮಹಿಳಾ ಅಧ್ಯಕ್ಷೆ ಕೊತ್ತೇ ಚಂದು,
ಜಿಲ್ಲಾ ಅಧ್ಯಕ್ಷೆರಾದ ಅರವಿಂದ ರಾಮಕೃಷ್ಣ,
ಕರೀಂನಗರ ಮಹಿಳಾ ಅಧ್ಯಕ್ಷೆ ಡಾ. ಇತರರು ಭಾಗವಹಿಸಿದ್ದರು.
ವರದಿ ಸತೀಶ್ ಕುಮಾರ್ ಕಲಾ
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    Journalist Bhalki, Bidar•
    11 hrs ago
  • Post by Ramesh babu.p
    3
    Post by Ramesh babu.p
    user_Ramesh babu.p
    Ramesh babu.p
    Jayanagara, Kolar•
    3 hrs ago
  • ನಮಸ್ತೆ 🙏ಕರ್ನಾಟಕ ನಮಸ್ತೆ ವೀಕ್ಷಕರೇ H t m ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ ನಾಟಿ ವೈದ್ಯ )
    1
    ನಮಸ್ತೆ 🙏ಕರ್ನಾಟಕ ನಮಸ್ತೆ ವೀಕ್ಷಕರೇ 
H t m ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ ನಾಟಿ ವೈದ್ಯ )
    user_Naushad khan Vahab khan
    Naushad khan Vahab khan
    Ayurvedic clinic Bengaluru South, Bengaluru Urban•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.